<p><strong>ಬೆಂಗಳೂರು</strong>: ‘ಸಾಮಾಜಿಕ ಜಾಲತಾಣಗಳು ಸರ್ವಜ್ಞ ಪೀಠದಂತೆ, ನ್ಯಾಯಾಲಯಗಳಂತೆ ಕೆಲಸ ಮಾಡಲು ಶುರುಮಾಡಿವೆ. ಇದರಿಂದ ಸತ್ಯವು ಅಗ್ಗವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. </p>.<p>ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರದಲ್ಲಿ ಗುರುಪ್ರಸಾದ ಕಾಗಿನೆಲೆ ಅವರ ‘ಸತ್ಕುಲಪ್ರಸೂತರು’, ಸಂತೋಷ್ ಅನಂತಪುರ ಅವರ ‘ತೃಷೆ’, ಮೌನೇಶ ಬಡಿಗೇರ ಅವರ ‘ಜೀವ ಜಾತ್ರೆ’ ಹಾಗೂ ‘ಪ್ರಜಾವಾಣಿ’ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ‘ಪೀಜಿ’ ಕೃತಿಗಳನ್ನು ಬಿಡುಗಡೆಮಾಡಿ, ಮಾತನಾಡಿದರು.</p>.<p>‘ಕಳೆದೊಂದು ದಶಕದಲ್ಲಿ ಸಾಮಾಜಿಕ ಜಾಲತಾಣ ಅಗಾಧವಾಗಿ ಬೆಳೆದು ನಿಂತಿದೆ. ಪ್ರಭುತ್ವವು ಅದನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದೇವೆ. ಈ ಜಾಲತಾಣಗಳು ಸತ್ಯವನ್ನು ಉತ್ಪಾದಿಸಲು ತೊಡಗಿಕೊಂಡಿವೆ. ಉತ್ಪಾದನೆ ಮತ್ತು ಶೋಧನೆಯ ನಡುವೆ ವ್ಯತ್ಯಾಸವಿದ್ದು, ಉತ್ಪಾದನೆಯಿಂದ ಸತ್ಯ ಅಗ್ಗವಾಗುತ್ತಿದೆ’ ಎಂದು ತಿಳಿಸಿದರು. </p>.<p>‘ಸಾಹಿತ್ಯದ ಕೆಲಸ ಅನುಭವ ಹಾಗೂ ಸತ್ಯದ ಶೋಧನೆ. ಬರಹಗಾರರು ಸತ್ಯದ ಹುಟುಕಾಟದಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣಗಳ ಉತ್ಪ್ರೇಕ್ಷೆಯ ಮುಂದೆ ಪ್ರಬುದ್ಧರ ಮುಗ್ಧತೆಯೂ ಹೋಗಿದೆ. ಸಮಾಧಾನವೂ ಕಳೆದು ಹೋಗಿದ್ದು, ಕಲೆಯ ಆಸ್ವಾದನೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. </p>.<p>ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಹಾಗೂ ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಕೃತಿಯ ಬಗ್ಗೆ ಮಾತಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಾಮಾಜಿಕ ಜಾಲತಾಣಗಳು ಸರ್ವಜ್ಞ ಪೀಠದಂತೆ, ನ್ಯಾಯಾಲಯಗಳಂತೆ ಕೆಲಸ ಮಾಡಲು ಶುರುಮಾಡಿವೆ. ಇದರಿಂದ ಸತ್ಯವು ಅಗ್ಗವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. </p>.<p>ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರದಲ್ಲಿ ಗುರುಪ್ರಸಾದ ಕಾಗಿನೆಲೆ ಅವರ ‘ಸತ್ಕುಲಪ್ರಸೂತರು’, ಸಂತೋಷ್ ಅನಂತಪುರ ಅವರ ‘ತೃಷೆ’, ಮೌನೇಶ ಬಡಿಗೇರ ಅವರ ‘ಜೀವ ಜಾತ್ರೆ’ ಹಾಗೂ ‘ಪ್ರಜಾವಾಣಿ’ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ‘ಪೀಜಿ’ ಕೃತಿಗಳನ್ನು ಬಿಡುಗಡೆಮಾಡಿ, ಮಾತನಾಡಿದರು.</p>.<p>‘ಕಳೆದೊಂದು ದಶಕದಲ್ಲಿ ಸಾಮಾಜಿಕ ಜಾಲತಾಣ ಅಗಾಧವಾಗಿ ಬೆಳೆದು ನಿಂತಿದೆ. ಪ್ರಭುತ್ವವು ಅದನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದೇವೆ. ಈ ಜಾಲತಾಣಗಳು ಸತ್ಯವನ್ನು ಉತ್ಪಾದಿಸಲು ತೊಡಗಿಕೊಂಡಿವೆ. ಉತ್ಪಾದನೆ ಮತ್ತು ಶೋಧನೆಯ ನಡುವೆ ವ್ಯತ್ಯಾಸವಿದ್ದು, ಉತ್ಪಾದನೆಯಿಂದ ಸತ್ಯ ಅಗ್ಗವಾಗುತ್ತಿದೆ’ ಎಂದು ತಿಳಿಸಿದರು. </p>.<p>‘ಸಾಹಿತ್ಯದ ಕೆಲಸ ಅನುಭವ ಹಾಗೂ ಸತ್ಯದ ಶೋಧನೆ. ಬರಹಗಾರರು ಸತ್ಯದ ಹುಟುಕಾಟದಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣಗಳ ಉತ್ಪ್ರೇಕ್ಷೆಯ ಮುಂದೆ ಪ್ರಬುದ್ಧರ ಮುಗ್ಧತೆಯೂ ಹೋಗಿದೆ. ಸಮಾಧಾನವೂ ಕಳೆದು ಹೋಗಿದ್ದು, ಕಲೆಯ ಆಸ್ವಾದನೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. </p>.<p>ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಹಾಗೂ ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಕೃತಿಯ ಬಗ್ಗೆ ಮಾತಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>