ಬೆಂಗಳೂರು: ಮೆಟ್ರೊ ನೇರಳೆ ಮಾರ್ಗದಲ್ಲಿ ವಿಸ್ತರಿತ ಸಂಚಾರದ ಕಾಮಗಾರಿಗಾಗಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಆಗಸ್ಟ್ 17ರಂದು ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ವಿಸ್ತರಿತ ಮಾರ್ಗದಲ್ಲಿ ಸಿಗ್ನಲಿಂಗ್ ಮತ್ತು ಇತರ ಕಾಮಗಾರಿಗಳು ಹಮ್ಮಿಕೊಂಡಿರುವುದರಿಂದ ಈ ವ್ಯತ್ಯಯವಾಗಲಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮೆಟ್ರೊ ಸೇವೆ ಎಂದಿನಂತೆ ಇರಲಿದೆ.
ಆಗಸ್ಟ್ 23 ಮತ್ತು 24ರಂದು ಬೆಳಿಗ್ಗೆ 5ರಿಂದ ಬೆಳಿಗ್ಗೆ 7ರ ವರೆಗೆ ಇದೇ ಮಾರ್ಗದಲ್ಲಿ ಮೆಟ್ರೊ ರೈಲು ಇರುವುದಿಲ್ಲ. ಬೆಳಿಗ್ಗೆ 7ರ ನಂತರ ಎಂದಿನಂತೆ ಸಂಚಾರ ಇರಲಿದೆ.
ಆಗಸ್ಟ್ 20ರಿಂದ 29ರ ವರೆಗೆ ಇದೇ ನೇರಳೆ ಮಾರ್ಗದ ಇನ್ನೊಂದು ತುದಿಯಾದ ಸ್ವಾಮಿ ವಿವೇಕಾನಂದ ರಸ್ತೆ –ಬೈಯಪ್ಪನಹಳ್ಳಿ –ಕೃಷ್ಣರಾಜಪುರ–ವೈಟ್ಫೀಲ್ಡ್ (ಕಾಡುಗೋಡಿ) ನಡುವೆ ಬೆಳಿಗ್ಗೆ 5ರಿಂದ 7ರವರೆಗೆ ರೈಲು ಸಂಚಾರ ಇರುವುದಿಲ್ಲ.
ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.