<p><strong>ಬೆಂಗಳೂರು:</strong> ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಕೆಎಂಎಫ್ನ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.</p>.<p>ಕ್ಯಾಂಪಸ್ನಲ್ಲಿ ಹಲವೆಡೆ ನಂದಿನಿ ಹಾಲಿನ ಬೂತುಗಳನ್ನು ಸ್ಥಾಪಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂಬ<br />ಪ್ರಸ್ತಾವಕ್ಕೆ ಈಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.</p>.<p>‘ಕ್ಯಾಂಪಸ್ನ ಹಲವೆಡೆ ಹಲವಾರು ಗೂಡಂಗಡಿಗಳಿದ್ದು, ಆರೋಗ್ಯಕ್ಕೆ ಹಾನಿಕರವಾದ ಪಾನೀಯವನ್ನು ಮಾರಾಟ ಮಾಡುತ್ತಿವೆ. ನಿಧಾನವಾಗಿ ಈ ಅಂಗಡಿಗಳನ್ನು ಮುಚ್ಚಿಸಿ, ನಂದಿನಿ ಬೂತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಸುವ ಚಿಂತನೆ ಇದೆ’ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬೂತು ಇಡುವ ಸ್ಥಳ ಗುರುತಿಸಿದ್ದೇವೆ. ಕೆಎಂಎಫ್ ಅದನ್ನು ನೇರವಾಗಿ ಅಥವಾ ಮಾರಾಟಗಾರರ ಮೂಲಕ ನಡೆಸಬಹುದು. ಆದರೆ ನಾವು ಕೆಎಂಎಫ್ ಜತೆಗೆ ನೇರ ಸಂಪರ್ಕದಲ್ಲಿ ಇರುತ್ತೇವೆ’ ಎಂದು ಕುಲಪತಿ ತಿಳಿಸಿದರು.</p>.<p>ಈ ಮಧ್ಯೆ, ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ (ಯುವಿಸಿಇ) ಬಳಿ 40 ವರ್ಷಗಳಿಂದ ನಡೆಯುತ್ತಿದ್ದ ಅನಧಿಕೃತ ಕ್ಯಾಂಟೀನ್ ಮುಚ್ಚಿಸಲಾಗಿದ್ದು, ಅಲ್ಲೂ ನಂದಿನಿ ಘಟಕ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಕೆಎಂಎಫ್ನ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.</p>.<p>ಕ್ಯಾಂಪಸ್ನಲ್ಲಿ ಹಲವೆಡೆ ನಂದಿನಿ ಹಾಲಿನ ಬೂತುಗಳನ್ನು ಸ್ಥಾಪಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂಬ<br />ಪ್ರಸ್ತಾವಕ್ಕೆ ಈಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.</p>.<p>‘ಕ್ಯಾಂಪಸ್ನ ಹಲವೆಡೆ ಹಲವಾರು ಗೂಡಂಗಡಿಗಳಿದ್ದು, ಆರೋಗ್ಯಕ್ಕೆ ಹಾನಿಕರವಾದ ಪಾನೀಯವನ್ನು ಮಾರಾಟ ಮಾಡುತ್ತಿವೆ. ನಿಧಾನವಾಗಿ ಈ ಅಂಗಡಿಗಳನ್ನು ಮುಚ್ಚಿಸಿ, ನಂದಿನಿ ಬೂತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಸುವ ಚಿಂತನೆ ಇದೆ’ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಬೂತು ಇಡುವ ಸ್ಥಳ ಗುರುತಿಸಿದ್ದೇವೆ. ಕೆಎಂಎಫ್ ಅದನ್ನು ನೇರವಾಗಿ ಅಥವಾ ಮಾರಾಟಗಾರರ ಮೂಲಕ ನಡೆಸಬಹುದು. ಆದರೆ ನಾವು ಕೆಎಂಎಫ್ ಜತೆಗೆ ನೇರ ಸಂಪರ್ಕದಲ್ಲಿ ಇರುತ್ತೇವೆ’ ಎಂದು ಕುಲಪತಿ ತಿಳಿಸಿದರು.</p>.<p>ಈ ಮಧ್ಯೆ, ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್ (ಯುವಿಸಿಇ) ಬಳಿ 40 ವರ್ಷಗಳಿಂದ ನಡೆಯುತ್ತಿದ್ದ ಅನಧಿಕೃತ ಕ್ಯಾಂಟೀನ್ ಮುಚ್ಚಿಸಲಾಗಿದ್ದು, ಅಲ್ಲೂ ನಂದಿನಿ ಘಟಕ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>