<p>ಬೆಂಗಳೂರು:ಥಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ 9 ವರ್ಷದ ಬಾಲಕಿ ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾಳೆ.</p>.<p>ವೈದ್ಯೆಯಾಗಬೇಕೆಂಬ ಬಾಲಕಿಯ ಕನಸನ್ನುನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಸಾಕಾರ ಮಾಡಿದ್ದಾರೆ.ಕೇರಳದ ಇರುಟ್ಟಿ ತಾಲ್ಲೂಕಿನ ಫಾತಿಮಾ ಎ.ಕೆ. ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದ ಬಾಲಕಿ. ಅಸ್ಥಿಮಜ್ಜೆ ಕಸಿಗೆ (ಬೋನ್ ಮ್ಯಾರೊ) ಒಳಗಾಗಿದ್ದ ಫಾತಿಮಾ, ತಪಾಸಣೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಈ ವೇಳೆ ದೊಡ್ಡವಳಾದ ಮೇಲೆ ವೈದ್ಯೆಯಾಗುವ ಕನಸನ್ನು ವೈದ್ಯರ ಬಳಿ ವ್ಯಕ್ತಪಡಿಸಿದ್ದಳು.</p>.<p>ಬಾಲಕಿಯ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದ ಆಸ್ಪತ್ರೆಯ ಆಡಳಿತ ಮಂಡಳಿ,ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಶನ್ ವಿಭಾಗದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಿತು. ಬಿಳಿ ಕೋಟ್ ಧರಿಸಿದ ಬಾಲಕಿ,ಸ್ಟೆತೋಸ್ಕೋಪ್ ಹಿಡಿದುಸಲಹಾ ವೈದ್ಯರ ತಂಡದ ಜತೆಗೆ ರೋಗಿಗಳನ್ನು ವಿಚಾರಿಸಿದಳು. ಈ ವೇಳೆ ವೈದ್ಯರುಸ್ಟೆತೋಸ್ಕೋಪ್ ನೆರವಿನಿಂದ ರೋಗಿಗಳನ್ನು ತಪಾಸಣೆ ಮಾಡುವ ವಿಧಾನವನ್ನು ತಿಳಿಸಿದರು.</p>.<p>ರೋಗಿಗಳೊಂದಿಗೆ ಸಮಾಲೋಚನೆ:ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ವೈದ್ಯರಿಗೆ ನೆರವಾದ ಬಾಲಕಿ, ಒಳರೋಗಿ ವಿಭಾಗದಲ್ಲಿ ರೋಗಿಗಳ ಜತೆಗೆ ಸಮಾಲೋಚನೆ ನಡೆಸಿದಳು.</p>.<p>‘ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿರುವುದು ಖುಷಿ ನೀಡಿದೆ. ವೈದ್ಯರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡೆ. ದೊಡ್ಡವಳಾದ ಬಳಿಕ ವೈದ್ಯೆಯಾಗಿ, ಬಡ ರೋಗಿಗಳ ಆರೈಕೆ ಮಾಡುತ್ತೇನೆ’ ಎಂದುಫಾತಿಮಾ ಎ.ಕೆ. ತಿಳಿಸಿದಳು.</p>.<p>ಆಸ್ಪತ್ರೆಯಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಶನ್ ವಿಭಾಗದ ನಿರ್ದೇಶಕ ಡಾ. ಸುನಿಲ್ ಭಟ್, ‘ಥಲಸ್ಸೇಮಿಯಾ, ಕ್ಯಾನ್ಸರ್ ಸೇರಿ ವಿವಿಧ ರೋಗಗಳ ಬಗ್ಗೆ ಬಹುತೇಕರಿಗೆ ತಪ್ಪು ಕಲ್ಪನೆಗಳಿವೆ. ಇದರಿಂದಾಗಿಯೇ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಈ ರೀತಿಯ ನಡೆಗಳಿಂದ ರೋಗಿಗಳಲ್ಲಿ ಭರವಸೆ ತುಂಬಲು ಸಾಧ್ಯ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು:ಥಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ 9 ವರ್ಷದ ಬಾಲಕಿ ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾಳೆ.</p>.<p>ವೈದ್ಯೆಯಾಗಬೇಕೆಂಬ ಬಾಲಕಿಯ ಕನಸನ್ನುನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಸಾಕಾರ ಮಾಡಿದ್ದಾರೆ.ಕೇರಳದ ಇರುಟ್ಟಿ ತಾಲ್ಲೂಕಿನ ಫಾತಿಮಾ ಎ.ಕೆ. ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದ ಬಾಲಕಿ. ಅಸ್ಥಿಮಜ್ಜೆ ಕಸಿಗೆ (ಬೋನ್ ಮ್ಯಾರೊ) ಒಳಗಾಗಿದ್ದ ಫಾತಿಮಾ, ತಪಾಸಣೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಈ ವೇಳೆ ದೊಡ್ಡವಳಾದ ಮೇಲೆ ವೈದ್ಯೆಯಾಗುವ ಕನಸನ್ನು ವೈದ್ಯರ ಬಳಿ ವ್ಯಕ್ತಪಡಿಸಿದ್ದಳು.</p>.<p>ಬಾಲಕಿಯ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದ ಆಸ್ಪತ್ರೆಯ ಆಡಳಿತ ಮಂಡಳಿ,ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಶನ್ ವಿಭಾಗದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಿತು. ಬಿಳಿ ಕೋಟ್ ಧರಿಸಿದ ಬಾಲಕಿ,ಸ್ಟೆತೋಸ್ಕೋಪ್ ಹಿಡಿದುಸಲಹಾ ವೈದ್ಯರ ತಂಡದ ಜತೆಗೆ ರೋಗಿಗಳನ್ನು ವಿಚಾರಿಸಿದಳು. ಈ ವೇಳೆ ವೈದ್ಯರುಸ್ಟೆತೋಸ್ಕೋಪ್ ನೆರವಿನಿಂದ ರೋಗಿಗಳನ್ನು ತಪಾಸಣೆ ಮಾಡುವ ವಿಧಾನವನ್ನು ತಿಳಿಸಿದರು.</p>.<p>ರೋಗಿಗಳೊಂದಿಗೆ ಸಮಾಲೋಚನೆ:ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ವೈದ್ಯರಿಗೆ ನೆರವಾದ ಬಾಲಕಿ, ಒಳರೋಗಿ ವಿಭಾಗದಲ್ಲಿ ರೋಗಿಗಳ ಜತೆಗೆ ಸಮಾಲೋಚನೆ ನಡೆಸಿದಳು.</p>.<p>‘ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿರುವುದು ಖುಷಿ ನೀಡಿದೆ. ವೈದ್ಯರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡೆ. ದೊಡ್ಡವಳಾದ ಬಳಿಕ ವೈದ್ಯೆಯಾಗಿ, ಬಡ ರೋಗಿಗಳ ಆರೈಕೆ ಮಾಡುತ್ತೇನೆ’ ಎಂದುಫಾತಿಮಾ ಎ.ಕೆ. ತಿಳಿಸಿದಳು.</p>.<p>ಆಸ್ಪತ್ರೆಯಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಶನ್ ವಿಭಾಗದ ನಿರ್ದೇಶಕ ಡಾ. ಸುನಿಲ್ ಭಟ್, ‘ಥಲಸ್ಸೇಮಿಯಾ, ಕ್ಯಾನ್ಸರ್ ಸೇರಿ ವಿವಿಧ ರೋಗಗಳ ಬಗ್ಗೆ ಬಹುತೇಕರಿಗೆ ತಪ್ಪು ಕಲ್ಪನೆಗಳಿವೆ. ಇದರಿಂದಾಗಿಯೇ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಈ ರೀತಿಯ ನಡೆಗಳಿಂದ ರೋಗಿಗಳಲ್ಲಿ ಭರವಸೆ ತುಂಬಲು ಸಾಧ್ಯ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>