2006ರ ಸೆ. 29ರಂದು ಬಿಬಿಎಂಪಿ ಅಧಿಸೂಚನೆ ಹೊರಡಿಸಿದ್ದ, 2007ರ ಜನವರಿಯಿಂದ ಜಾರಿಗೆ ಬಂದಿದ್ದ ಜಾಹೀರಾತು ಬೈಲಾಗಳ ಪ್ರಕಾರ ನಗರವನ್ನು ಎ, ಬಿ, ಸಿ ಮತ್ತು ಡಿ ವಲಯಗಳನ್ನಾಗಿ ವಿಂಗಡಿಸಲಾ
ಗಿತ್ತು. ಎ–ವಲಯದಲ್ಲಿ ಕುಮಾರಕೃಪಾ ರಸ್ತೆ, ರಾಜಭವನ ರಸ್ತೆ, ಅಂಬೇಡ್ಕರ್ ಬೀದಿ, ಅಂಚೆ ಕಚೇರಿ ರಸ್ತೆ, ಬಸವೇಶ್ವರ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್.ವೃತ್ತ, ಕಬ್ಬನ್ಪಾರ್ಕ್ ಮತ್ತು ಲಾಲ್ಬಾಗ್, ನೃಪತುಂಗ ರಸ್ತೆ, ಅರಮನೆ ರಸ್ತೆಗಳನ್ನು ಪಟ್ಟಿ ಮಾಡಲಾಗಿತ್ತು. ಇಲ್ಲಿ ಜಾಹೀರಾತು ಪ್ರದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. 2018ರಲ್ಲಿ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ಬೈಲಾದಲ್ಲೂ ಈ ನಿಷೇಧವನ್ನು ಮುಂದುವರಿಸಲಾಗಿತ್ತು.