ಬೆಂಗಳೂರು: ‘ಕೋವಿಡ್ ಪೂರ್ವದ ಪರಿಸ್ಥಿತಿಗೆ ಹೋಲಿಸಿದಲ್ಲಿ ಈಗ ವಿವಿಧ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಿ ಸೇವೆ ನೀಡಬೇಕಾಗಿದೆ. ಈ ಸಂದರ್ಭದಲ್ಲಿ ಭಯಪಟ್ಟು ಹಿಂದೇಟು ಹಾಕಿದರೆ ನಮ್ಮ ವೃತ್ತಿಗೆ ಅರ್ಥ ಇರುವುದಿಲ್ಲ. ಪ್ರತಿಯೊಬ್ಬರಿಗೂ ಕುಟುಂಬ ಇರುತ್ತದೆ. ಆದರೆ, ಈಗ ರೋಗಿಗಳಿಗೆ ಉತ್ತಮ ಆರೈಕೆ ಹಾಗೂ ರೋಗದ ವಿರುದ್ಧದ ಹೋರಾಟ ನಮ್ಮ ಆದ್ಯತೆಯಾಗಿದೆ.’