‘ಪುನಃ ಹಣಕ್ಕೆ ಒತ್ತಾಯಿಸಿದ್ದ ಆರೋಪಿ, ದೂರುದಾರರಿಂದ ಮತ್ತಷ್ಟು ಹಣ ಪಡೆದಿದ್ದ. ಇದಾದ ನಂತರವೂ ಸ್ನೇಹಿತೆಯನ್ನು ಕಳುಹಿಸಿರಲಿಲ್ಲ. ಬೇಸತ್ತ ದೂರುದಾರ, ಹಣ ವಾಪಸು ನೀಡುವಂತೆ ಒತ್ತಾಯಿಸಿದ್ದರು. ಹಣ ಮರು
ಪಾವತಿಸಲು ಮತ್ತಷ್ಟು ಶುಲ್ಕ ಪಾವತಿಸಬೇಕೆಂದು ಆರೋಪಿ ಹೇಳಿದ್ದ. ಅದನ್ನೂ ನಂಬಿದ್ದ ದೂರುದಾರ ಹಂತ ಹಂತವಾಗಿ ₹ 7.30 ಲಕ್ಷ ನೀಡಿದ್ದರು. ಇದಾದ ನಂತರ, ಆರೋಪಿ ನಾಪತ್ತೆಯಾಗಿದ್ದಾನೆ’ ಎಂದು ಮೂಲಗಳು ಹೇಳಿವೆ.