ಗದ್ದಿಗೆ ಮಠದ ಮಹಾಂತ ಶ್ರೀಗಳು, ಕೊಡಗು ಕಲ್ಮಠದ ಮಹಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು. ಲೇಖಕ ಬಾಲಚಂದ್ರ ಅವರ ‘ಜೀವನ ದರ್ಶನʼ ಮತ್ತು ‘ಯುವಜನತೆಗೆ ಸ್ಪೂರ್ತಿʼ ಕೃತಿಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕ ಎಂ.ಜಗದೀಶ್ ಬಿಡುಗಡೆ ಮಾಡಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಕನ್ನಡ ಚಳವಳಿ ಮುಖಂಡ ಫಾಲನೇತ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗರಾಜು ವೇದಿಕೆಯಲ್ಲಿದ್ದರು.