ಸೇವಾ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿದ್ದ ಬಸವನಗುಡಿಯ ಪಟ್ಟಾಲಮ್ಮ ದೇವಸ್ಥಾನ ರಸ್ತೆಯಲ್ಲಿರುವ ಎ.ವಿ.ಆಸ್ಪತ್ರೆ ಮತ್ತು ಇದರ ಪಾಲುದಾರರಾದ ಡಾ.ಎಂ.ರಮೇಶ್ ಹಾಗೂ ಡಾ.ಸರಸ್ವತಿ ರಮೇಶ್ ಅವರು ದೂರುದಾರರಿಗೆ ₹ 10.90 ಲಕ್ಷವನ್ನು ಪರಿಹಾರ ರೂಪವಾಗಿ ನಾಲ್ಕು ವಾರಗಳ ಒಳಗೆ ನೀಡಬೇಕು. ಈ ಮೊತ್ತವನ್ನು ನೋಟಿಸ್ ನೀಡಿದ ದಿನದಿಂದ ಪರಿಹಾರ ಘೋಷಿಸಿದ ದಿನದವರೆಗೆ ವಾರ್ಷಿಕ ಶೇ 18ರ ಬಡ್ಡಿಯಂತೆ ಪಾವತಿಸಬೇಕು. ಅಂತೆಯೇ ವ್ಯಾಜ್ಯದ ಖರ್ಚು ₹ 5 ಸಾವಿರವನ್ನೂ ದೂರುದಾರರಿಗೆ ನೀಡಬೇಕು’ ಎಂದು ಆದೇಶಿಸಲಾಗಿದೆ.