'ಹಿಂದೂಗಳನ್ನು ಗುರಿಪಡಿಸಿ, ಗಲಭೆ ನಡೆದಿರುವುದಾಗಿ ವರದಿಯಲ್ಲಿದೆ. ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧ. ಪ್ರವಾದಿ ನಿಂದನೆಯಪೋಸ್ಟ್ ಹಾಕಿದ್ದ ಆರೋಪಿಯ ಬಂಧನಕ್ಕೆ ಪೊಲೀಸರು ವಿಳಂಬಿಸಿದ ಕಾರಣದಿಂದ ಗಲಭೆ ನಡೆಯಿತು. ಈ ವೇಳೆ ದೇವಸ್ಥಾನ ಹಾಗೂ ಹಿಂದೂಗಳ ಮನೆಗಳಿಗೆ ಹಾನಿಯಾಗದಂತೆ ಅಲ್ಲಿನ ಮುಸ್ಲಿಂ ಯುವಕರು ರಕ್ಷಣೆ ನೀಡಿರುವುದಾಗಿ ಬಂಧಿತ ಆರೋಪಿ ನವೀನ್ ತಾಯಿಯೇ ಹೇಳಿದ್ದಾರೆ. ಆದರೆ, ಸತ್ಯಶೋಧನಾ ತಂಡವು ಏಕಪಕ್ಷೀಯ ವರದಿ ಮೂಲಕ ಘಟನೆಯನ್ನು ಕೋಮುವಾದೀಕರಣ ಮಾಡಲು ಯತ್ನಿಸಿದೆ' ಎಂದು ದೂರಿದರು.