ಶುಕ್ರವಾರ ಇಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕನಿಷ್ಠ ಎರಡು ಕಡೆ ಪ್ರಾಯೋಗಿಕವಾಗಿ ಅಗ್ರಿ ಟೂರಿಸಂ ಜಾರಿಗೊಳಿಸಲಾಗುತ್ತದೆ. ನಗರವಾಸಿಗಳಿಗೆ ಕೃಷಿ ಸಂಸ್ಕೃತಿ ಹಾಗೂ ಗ್ರಾಮೀಣ ಸಂಸ್ಕೃತಿ ಪರಿಚಯಿಸುವುದು ಇದರ ಪ್ರಮುಖ ಉದ್ದೇಶ. ಎತ್ತಿನಗಾಡಿ ಪ್ರಯಾಣ, ನಾಟಿ ಮಾಡುವುದು, ದನಕರುಗಳ ಮೈತೊಳೆಯುವುದು, ಚಿನ್ನಿದಾಂಡು, ಗೋಲಿ, ಲಗೋರಿ ಆಟ ಮೊದಲಾದವುಗಳನ್ನು ಇದು ಒಳಗೊಂಡಿರುತ್ತದೆ’ ಎಂದರು.