‘ಡಾರ್ಕ್ನೆಟ್, ಬಿಟ್ಕಾಯಿನ್ ಹಾಗೂ ಇತರೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇವುಗಳನ್ನು ಭೇದಿಸಲು ವಿಶೇಷ ಜ್ಞಾನದ ಅವಶ್ಯಕತೆ ಇದೆ. ಆದರೆ, ಅಗತ್ಯ ಅರ್ಹತೆ ಹಾಗೂ ತರಬೇತಿ ಇಲ್ಲದ ಅಪರಾಧ ಹಾಗೂ ಸಂಚಾರ ಪೊಲೀಸರನ್ನೇ ಸೈಬರ್ ಠಾಣೆಗೆ ನಿಯೋಜಿಸಲಾಗುತ್ತಿದೆ. ಠಾಣೆಗೆ ಒಬ್ಬರು ಅಥವಾ ಇಬ್ಬರನ್ನು ಎಂಸಿಎ, ಬಿಸಿಎ, ಡಿಪ್ಲೊಮಾ ಪದವೀಧರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು. ಪ್ರತಿ ಕಂದಾಯ ಜಿಲ್ಲೆಯಲ್ಲಿ ಮಿನಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಬೇಕು. ಲಾಕಪ್ ಕೈದಿಗಳಿಗೆ ದಿನಕ್ಕೆ ಎರಡು ಊಟಗಳನ್ನು ನೀಡಲಾಗುತ್ತಿದೆ. ದಿನಕ್ಕೆ ಮೂರು ಊಟ ನಿಗದಿಪಡಿಸಿ, ಅದರ ಮೊತ್ತವನ್ನು ಹೆಚ್ಚಿಸಬೇಕು. ಕಾರ್ಯ ನಿಯೋಜನೆ ವೇಳೆ ಪುರುಷ ಹಾಗೂ ಮಹಿಳಾ ಸಿಬ್ಬಂದಿ ನಡುವಿನ ಅಸಮಾನತೆಯನ್ನು ಕಡಿಮೆ ಮಾಡಿ, ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂಬ ಶಿಫಾರಸುಗಳು ಸಹ ವರದಿಯಲ್ಲಿವೆ.