ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ಗ್ರಾಹಕರ ಸಂವಾದ ಸಭೆ ನಾಳೆ

Last Updated 16 ಸೆಪ್ಟೆಂಬರ್ 2021, 19:17 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು (ಬೆಸ್ಕಾಂ) ಜಾಲಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿನ ಗ್ರಾಹಕರಿಗಾಗಿ ಇದೇ 18ರಂದು ಸಂವಾದ ಸಭೆ ಏರ್ಪಡಿಸಿದೆ.

ಜಾಲಹಳ್ಳಿ, ದೊಡ್ಡಬೊಮ್ಮಸಂದ್ರ, ಚಾಮುಂಡೇಶ್ವರಿ ಬಡಾವಣೆ, ರಾಮಣ್ಣ ಗಾರ್ಡನ್, ರಾಮಚಂದ್ರಪುರ, ಅಬ್ಬಿಗೆರೆ, ಎಚ್‌ವಿವಿ ವ್ಯಾಲಿ, ಗಂಗಮ್ಮ ವೃತ್ತ, ಕುವೆಂಪು ನಗರ, ಸಿಂಗಾಪುರ, ಲಕ್ಷ್ಮಿಪುರ, ವಡೇರಹಳ್ಳಿ, ಕಮ್ಮಗೊಂಡನಹಳ್ಳಿ, ಬಾಹುಬಲಿ ನಗರ, ಮುತ್ಯಾಲನಗರ, ಸುಂದರನಗರ, ಬಿಇಎಲ್‌, ಎಚ್‌ಎಂಟಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಗ್ರಾಹಕರು ಜಾಲಹಳ್ಳಿ ಉಪವಿಭಾಗ ಕಚೇರಿಯಲ್ಲಿ ಅಂದು ಮಧ್ಯಾಹ್ನ 3ಕ್ಕೆ ಸಭೆಗೆ ಹಾಜರಾಗಬಹುದು.

ಚಂದಾಪುರ ಉಪವಿಭಾಗ

ಚಂದಾಪುರ, ಬೊಮ್ಮಸಂದ್ರ, ಹೆಬ್ಬಗೋಡಿ, ಸೂರ್ಯನಗರ ಶಾಖೆಗಳಿಗೆ ಒಳಪಡುವ ಗ್ರಾಹಕರುಚಂದಾಪುರದ ಬೆಸ್ಕಾಂ ಕಚೇರಿಯಲ್ಲಿಯೂ 18ರಂದು ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದೆ ಎಂದು ಬೆಸ್ಕಾಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT