<p><strong>ಬೆಂಗಳೂರು:</strong> ‘ದೇಶದಲ್ಲಿ 5.70 ಕೋಟಿ ಸಣ್ಣ ಉದ್ಯಮಗಳಿವೆ. ಈ ಉದ್ಯಮಗಳನ್ನು ನಡೆಸುತ್ತಿರುವವರಲ್ಲಿ ಶೇ 60ರಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರು. ಅನ್ನಭಾಗ್ಯ, ಆ ಭಾಗ್ಯ–ಈ ಭಾಗ್ಯ ಎಂದು ಉಚಿತವಾಗಿ ಅದು ಇದು ಕೊಟ್ಟು ಅವರನ್ನು ಭಿಕ್ಷುಕರನ್ನಾಗಿ ಮಾಡುವುದಕ್ಕಿಂತ ಈ ಉದ್ಯಮಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ಸಬಲರನ್ನಾಗಿ ಮಾಡಬೇಕು’ ಎಂದು ಸ್ವದೇಶಿ ಜಾಗರಣ ಮಂಚ್ನ ರಾಷ್ಟ್ರೀಯ ಪರಿಷತ್ ಸದಸ್ಯ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.</p>.<p>ಬಸವೇಶ್ವರನಗರದ ಸಾಣೆಗುರುವನಹಳ್ಳಿಯಲ್ಲಿನ ನೇತಾಜಿ ಆಟದ ಮೈದಾನದಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದಲ್ಲಿ ಗುರುವಾರ ಮಾತನಾಡಿದ ಅವರು, ‘ದೇಶದ ಆರ್ಥಿಕತೆಗೆ ಕಾರ್ಪೊರೇಟ್ ವಲಯದ ಕೊಡುಗೆ ದೊಡ್ಡದು ಎಂಬ ವಾದವಿದೆ. ಆದರೆ, ಇದು ಶುದ್ಧ ಸುಳ್ಳು. ಜಿಡಿಪಿಗೆ ಈ ವಲಯದ ಕೊಡುಗೆ ಶೇ 15 ಮಾತ್ರ. ಅದೇ ಸಣ್ಣ ಉದ್ದಿಮೆಗಳು (ಕಂಪನಿ ಅಲ್ಲದ ವಲಯ) ಜಿಡಿಪಿಗೆ ಶೇ 50ರಷ್ಟು ಕೊಡುಗೆ ನೀಡುತ್ತಿವೆ’ ಎಂದರು.</p>.<p>‘ಸಣ್ಣ ಉದ್ದಿಮೆಗಳ ಪೈಕಿಶೇ 70ರಷ್ಟು ನೋಂದಣಿ ಆಗಿಲ್ಲ. ಆದರೆ, ಈ ವಲಯ ಶೇ 90ರಷ್ಟು ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಆದರೆ, ಕಾರ್ಪೊರೇಟ್ ವಲಯದಿಂದ ಆಗುತ್ತಿರುವ ಉದ್ಯೋಗ ಸೃಷ್ಟಿ ಶೇ 10 ಮಾತ್ರ’ ಎಂದು ಅವರು ಹೇಳಿದರು.</p>.<p>‘ಮುಂದಿನ ಬಜೆಟ್ನಲ್ಲಿ ಸಣ್ಣ ಉದ್ದಿಮೆಗಳು ಮತ್ತು ಬೀದಿ ಬದಿ ವ್ಯಾಪಾರಿ ವಲಯಕ್ಕೆ ₹5 ಸಾವಿರ ಕೋಟಿ ಆವರ್ತ ನಿಧಿ ಇಡಬೇಕು’ ಎಂದು ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.</p>.<p class="Subhead"><strong>200 ಮಳಿಗೆ:</strong> ದೇಸಿ ಉತ್ಪನ್ನಗಳು ಮತ್ತು ಸಾವಯವ ಕೃಷಿ ಪದಾರ್ಥಗಳು ಹಾಗೂ ದೇಸಿ ಉಡುಗೆಗಳು ಸೇರಿದಂತೆ ಕಿರು ಉದ್ಯಮಗಳು ಉತ್ಪಾದಿಸುವ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. 200 ಮಳಿಗೆಗಳನ್ನು ಹಾಕಲಾಗಿದ್ದು, ಐದು ದಿನಗಳವರೆಗೆ ಮೇಳ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ದೇಶದಲ್ಲಿ 5.70 ಕೋಟಿ ಸಣ್ಣ ಉದ್ಯಮಗಳಿವೆ. ಈ ಉದ್ಯಮಗಳನ್ನು ನಡೆಸುತ್ತಿರುವವರಲ್ಲಿ ಶೇ 60ರಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರು. ಅನ್ನಭಾಗ್ಯ, ಆ ಭಾಗ್ಯ–ಈ ಭಾಗ್ಯ ಎಂದು ಉಚಿತವಾಗಿ ಅದು ಇದು ಕೊಟ್ಟು ಅವರನ್ನು ಭಿಕ್ಷುಕರನ್ನಾಗಿ ಮಾಡುವುದಕ್ಕಿಂತ ಈ ಉದ್ಯಮಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ಸಬಲರನ್ನಾಗಿ ಮಾಡಬೇಕು’ ಎಂದು ಸ್ವದೇಶಿ ಜಾಗರಣ ಮಂಚ್ನ ರಾಷ್ಟ್ರೀಯ ಪರಿಷತ್ ಸದಸ್ಯ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.</p>.<p>ಬಸವೇಶ್ವರನಗರದ ಸಾಣೆಗುರುವನಹಳ್ಳಿಯಲ್ಲಿನ ನೇತಾಜಿ ಆಟದ ಮೈದಾನದಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದಲ್ಲಿ ಗುರುವಾರ ಮಾತನಾಡಿದ ಅವರು, ‘ದೇಶದ ಆರ್ಥಿಕತೆಗೆ ಕಾರ್ಪೊರೇಟ್ ವಲಯದ ಕೊಡುಗೆ ದೊಡ್ಡದು ಎಂಬ ವಾದವಿದೆ. ಆದರೆ, ಇದು ಶುದ್ಧ ಸುಳ್ಳು. ಜಿಡಿಪಿಗೆ ಈ ವಲಯದ ಕೊಡುಗೆ ಶೇ 15 ಮಾತ್ರ. ಅದೇ ಸಣ್ಣ ಉದ್ದಿಮೆಗಳು (ಕಂಪನಿ ಅಲ್ಲದ ವಲಯ) ಜಿಡಿಪಿಗೆ ಶೇ 50ರಷ್ಟು ಕೊಡುಗೆ ನೀಡುತ್ತಿವೆ’ ಎಂದರು.</p>.<p>‘ಸಣ್ಣ ಉದ್ದಿಮೆಗಳ ಪೈಕಿಶೇ 70ರಷ್ಟು ನೋಂದಣಿ ಆಗಿಲ್ಲ. ಆದರೆ, ಈ ವಲಯ ಶೇ 90ರಷ್ಟು ಉದ್ಯೋಗಾವಕಾಶ ಸೃಷ್ಟಿಸುತ್ತಿದೆ. ಆದರೆ, ಕಾರ್ಪೊರೇಟ್ ವಲಯದಿಂದ ಆಗುತ್ತಿರುವ ಉದ್ಯೋಗ ಸೃಷ್ಟಿ ಶೇ 10 ಮಾತ್ರ’ ಎಂದು ಅವರು ಹೇಳಿದರು.</p>.<p>‘ಮುಂದಿನ ಬಜೆಟ್ನಲ್ಲಿ ಸಣ್ಣ ಉದ್ದಿಮೆಗಳು ಮತ್ತು ಬೀದಿ ಬದಿ ವ್ಯಾಪಾರಿ ವಲಯಕ್ಕೆ ₹5 ಸಾವಿರ ಕೋಟಿ ಆವರ್ತ ನಿಧಿ ಇಡಬೇಕು’ ಎಂದು ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.</p>.<p class="Subhead"><strong>200 ಮಳಿಗೆ:</strong> ದೇಸಿ ಉತ್ಪನ್ನಗಳು ಮತ್ತು ಸಾವಯವ ಕೃಷಿ ಪದಾರ್ಥಗಳು ಹಾಗೂ ದೇಸಿ ಉಡುಗೆಗಳು ಸೇರಿದಂತೆ ಕಿರು ಉದ್ಯಮಗಳು ಉತ್ಪಾದಿಸುವ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. 200 ಮಳಿಗೆಗಳನ್ನು ಹಾಕಲಾಗಿದ್ದು, ಐದು ದಿನಗಳವರೆಗೆ ಮೇಳ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>