‘ವರ್ಗಾವಣೆ ಒಂದು ಪ್ರಕ್ರಿಯೆ‘ ‘
ಈ ವಿಚಾರವಾಗಿ ಆಡಳಿತ ಮಂಡಳಿಯೊಂದಿಗೆ ಸಭೆ ನಡೆದಿದೆ. ಯಾವುದೇ ಸಂಸ್ಥೆ ಸುಗಮವಾಗಿ ನಡೆಯಬೇಕಿದ್ದರೆ ವರ್ಗಾವಣೆ ಮಾಡುವುದು ಒಂದು ಪ್ರಕ್ರಿಯೆ. ಅದರಂತೆ ಆಡಳಿತ ಮಂಡಳಿ ವರ್ಗಾವಣೆ ಮಾಡಿತ್ತು’ ಎಂದು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ವೈ.ಸಿ.ಕಮಲಾ ತಿಳಿಸಿದ್ದಾರೆ. ‘ನ್ಯಾಷನಲ್ ಕಾಲೇಜಿಗಿಂತ ಪ್ರಗತಿಪರವಾದ ಕಾಲೇಜು ಬೇರೊಂದು ಇದೆಯೇ? ಜಯನಗರ ಗೌರಿಬಿದನೂರು ಬಾಗೇಪಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಹೆಚ್ಚಿನವರು ಹಿಂದುಳಿದ ವರ್ಗದ ಪ್ರಾಧ್ಯಾಪಕರೇ ಇದ್ದಾರೆ. ಜಾತಿ ವಿಚಾರಕ್ಕೆ ಮಾಡಿರುವ ಆರೋಪ ಸುಳ್ಳು’ ಎಂದು ಸ್ಪಷ್ಟಪಡಿಸಿದ್ದಾರೆ.