<p><strong>ಲಖನೌ (ಪಿಟಿಐ):</strong> ‘ಸರ್ಕಾರಿ ಬಂಗಲೆಗೆ ಹಾನಿ ಮಾಡಿದ್ದೇನೆ ಎನ್ನುವ ವರದಿ ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಬಿಜೆಪಿ ಸಂಚು’ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.</p>.<p>‘ಅಖಿಲೇಶ್ ತೆರವುಗೊಳಿಸಿದ ನಂ. 4, ವಿಕ್ರಮಾದಿತ್ಯ ಮಾರ್ಗ್ ಬಂಗಲೆಗೆ ಹಾನಿ ಮಾಡಲಾಗಿದೆ ಎನ್ನುವ ವರದಿ ಮಾಧ್ಯಮಗಳಲ್ಲಿ ಹಾಗೂ ಜನಸಾಮಾ<br /> ನ್ಯರಲ್ಲಿ ಹರಿದಾಡುತ್ತಿದೆ’ ಎಂದು ರಾಜ್ಯಪಾಲ ರಾಮ ನಾಯ್ಕ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>.<p>ರಾಜ್ಯಪಾಲರ ವಿರುದ್ಧ ಹರಿಹಾಯ್ದಿರುವ ಅಖಿಲೇಶ್, ಅವರದ್ದು ‘ಆರ್ಎಸ್ಎಸ್ ಆತ್ಮ’ ಎಂದು ಹೇಳಿದ್ದಾರೆ.</p>.<p>‘ನಾನು ತೆರವುಗೊಳಿಸಿದ ಬಂಗಲೆಯನ್ನು ಮಾಧ್ಯಮಗಳಲ್ಲಿ ತೋರಿಸುವ ಮೊದಲು, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಅಭಿಷೇಕ್ ಕೌಶಿಕ್ ಹಾಗೂ ಐಎಎಸ್ ಅಧಿಕಾರಿ ಮೃತ್ಯುಂಜಯ ನಾರಾಯಣ ಅವರು ಏಕೆ ಬಂಗಲೆ ಪ್ರವೇಶಿಸಿದರು ಎಂದು ಸರ್ಕಾರವನ್ನು ಪ್ರಶ್ನಿಸಲು ಬಯಸುತ್ತೇನೆ’ ಎಂದಿದ್ದಾರೆ.</p>.<p>‘ಅವರು ಬಂಗಲೆಯಲ್ಲಿದ್ದ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ, ನಾನು ಯಾವ ವಸ್ತುಗಳನ್ನು ತೆಗೆದುಕೊಂಡಿದ್ದೇನೆ ಎನ್ನುವುದನ್ನು ಹೇಳಲಿ. ತಕ್ಷಣವೇ ಅವುಗಳನ್ನು ಹಿಂದಿರುಗಿಸುತ್ತೇನೆ. ಬಂಗಲೆಗಾಗಿ ನಾನು ₹42 ಕೋಟಿ ವೆಚ್ಚ ಮಾಡಿದ್ದೇನೆ, ಅಲ್ಲಿದ್ದ ಈಜುಕೊಳವನ್ನು ಬಂಗಲೆ ತೆರವುಗೊಳಿಸುವ ಮೊದಲು ಮುಚ್ಚಿಹಾಕಿದ್ದೇನೆ ಎಂದೆಲ್ಲಾ ಕೆಲವರು ಹೇಳುತ್ತಿದ್ದಾರೆ. ನಾನು ಪುನಃ ಅಲ್ಲಿಗೆ ಹೋಗಲು ಸಿದ್ಧನಿದ್ದೇನೆ. ಈಜುಕೊಳ ಎಲ್ಲಿದೆ ಎಂದು ನನಗೆ ತೋರಿಸಲಿ. ವರದಿಗಾಗಿ ಕಾಯುತ್ತಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶಭರಿತರಾಗಿ ಹೇಳಿದ್ದಾರೆ.</p>.<p>‘ಗೋರಖ್ಪುರ, ಫೂಲ್ಪುರ, ಕೈರಾನಾ ಹಾಗೂ ನೂರ್ಪುರ ಉಪಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಬಿಜೆಪಿ ಇಂತಹ ಸಂಚು ಮಾಡುತ್ತಿದೆ’ ಎಂದು ಅಖಿಲೇಶ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ (ಪಿಟಿಐ):</strong> ‘ಸರ್ಕಾರಿ ಬಂಗಲೆಗೆ ಹಾನಿ ಮಾಡಿದ್ದೇನೆ ಎನ್ನುವ ವರದಿ ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಬಿಜೆಪಿ ಸಂಚು’ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.</p>.<p>‘ಅಖಿಲೇಶ್ ತೆರವುಗೊಳಿಸಿದ ನಂ. 4, ವಿಕ್ರಮಾದಿತ್ಯ ಮಾರ್ಗ್ ಬಂಗಲೆಗೆ ಹಾನಿ ಮಾಡಲಾಗಿದೆ ಎನ್ನುವ ವರದಿ ಮಾಧ್ಯಮಗಳಲ್ಲಿ ಹಾಗೂ ಜನಸಾಮಾ<br /> ನ್ಯರಲ್ಲಿ ಹರಿದಾಡುತ್ತಿದೆ’ ಎಂದು ರಾಜ್ಯಪಾಲ ರಾಮ ನಾಯ್ಕ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>.<p>ರಾಜ್ಯಪಾಲರ ವಿರುದ್ಧ ಹರಿಹಾಯ್ದಿರುವ ಅಖಿಲೇಶ್, ಅವರದ್ದು ‘ಆರ್ಎಸ್ಎಸ್ ಆತ್ಮ’ ಎಂದು ಹೇಳಿದ್ದಾರೆ.</p>.<p>‘ನಾನು ತೆರವುಗೊಳಿಸಿದ ಬಂಗಲೆಯನ್ನು ಮಾಧ್ಯಮಗಳಲ್ಲಿ ತೋರಿಸುವ ಮೊದಲು, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಅಭಿಷೇಕ್ ಕೌಶಿಕ್ ಹಾಗೂ ಐಎಎಸ್ ಅಧಿಕಾರಿ ಮೃತ್ಯುಂಜಯ ನಾರಾಯಣ ಅವರು ಏಕೆ ಬಂಗಲೆ ಪ್ರವೇಶಿಸಿದರು ಎಂದು ಸರ್ಕಾರವನ್ನು ಪ್ರಶ್ನಿಸಲು ಬಯಸುತ್ತೇನೆ’ ಎಂದಿದ್ದಾರೆ.</p>.<p>‘ಅವರು ಬಂಗಲೆಯಲ್ಲಿದ್ದ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ, ನಾನು ಯಾವ ವಸ್ತುಗಳನ್ನು ತೆಗೆದುಕೊಂಡಿದ್ದೇನೆ ಎನ್ನುವುದನ್ನು ಹೇಳಲಿ. ತಕ್ಷಣವೇ ಅವುಗಳನ್ನು ಹಿಂದಿರುಗಿಸುತ್ತೇನೆ. ಬಂಗಲೆಗಾಗಿ ನಾನು ₹42 ಕೋಟಿ ವೆಚ್ಚ ಮಾಡಿದ್ದೇನೆ, ಅಲ್ಲಿದ್ದ ಈಜುಕೊಳವನ್ನು ಬಂಗಲೆ ತೆರವುಗೊಳಿಸುವ ಮೊದಲು ಮುಚ್ಚಿಹಾಕಿದ್ದೇನೆ ಎಂದೆಲ್ಲಾ ಕೆಲವರು ಹೇಳುತ್ತಿದ್ದಾರೆ. ನಾನು ಪುನಃ ಅಲ್ಲಿಗೆ ಹೋಗಲು ಸಿದ್ಧನಿದ್ದೇನೆ. ಈಜುಕೊಳ ಎಲ್ಲಿದೆ ಎಂದು ನನಗೆ ತೋರಿಸಲಿ. ವರದಿಗಾಗಿ ಕಾಯುತ್ತಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶಭರಿತರಾಗಿ ಹೇಳಿದ್ದಾರೆ.</p>.<p>‘ಗೋರಖ್ಪುರ, ಫೂಲ್ಪುರ, ಕೈರಾನಾ ಹಾಗೂ ನೂರ್ಪುರ ಉಪಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಬಿಜೆಪಿ ಇಂತಹ ಸಂಚು ಮಾಡುತ್ತಿದೆ’ ಎಂದು ಅಖಿಲೇಶ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>