‘ಕಾರಣಾಂತರಗಳಿಂದ ಕಟ್ಟಡ ಕಾಮಗಾರಿ ನಿಂತಿರಬಹುದು. ಆದರೆ, ಮಳೆ ಬಂದಾಗ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿದೆ. ನೀರು ಒಂದೆಡೆ ನಿಂತಿರುವುದರಿಂದ ದುರ್ನಾತ ಬರುತ್ತಿದೆ. ಕ್ರಮೇಣ ಸೊಳ್ಳೆಯ ಕಾಟವೂ ಅಧಿಕವಾಗಿದ್ದು, ಡೆಂಗಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಸ್ಪದ ನೀಡುವಂತಿದೆ’ ಎಂದು ಸ್ಥಳಿಯ ನಿವಾಸಿ ರಾಜೀವ್ ಕಳವಳ ವ್ಯಕ್ತಪಡಿಸಿದರು.