ರಾಮೋತ್ಸವದ ವಿಶೇಷ ಚಪ್ಪರದ ಗುದ್ದಲಿ ಪೂಜೆಯು ಇದೇ 22ರಂದು ಬೆಳಿಗ್ಗೆ 10.45ಕ್ಕೆ ಕೋಟೆ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಸಂಗೀತೋತ್ಸವದಲ್ಲಿ ವಿಜಯ ಪ್ರಕಾಶ್, ಎಂ.ಎಸ್. ಶೀಲಾ, ಸಿಕ್ಕಿಲ್ ಗುರುಚರಣ್, ವಿಶ್ವ ಮೋಹನ್ ಭಟ್, ಪ್ರವೀಣ್ ಗೋಡ್ಖಿಂಡಿ, ಮ್ಯಾಂಡೋಲಿನ್ ಯು. ರಾಜೇಶ್, ಮಲ್ಲಾಡಿ ಸಹೋದರರು, ನಿರುಪಮಾ ರಾಜೇಂದ್ರ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ ಎಂದು ಮಂಡಳಿಯ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಎಸ್.ಎನ್. ವರದರಾಜು ಪ್ರಕಟಣೆಯಲ್ಲಿತಿಳಿಸಿದ್ದಾರೆ.