‘ಶೇಷಾದ್ರಿಪುರದ ರೈಲ್ವೆ ಪರ್ಯಾಯ ರಸ್ತೆಯಲ್ಲಿ ಜೂನ್ 23ರಂದು ಸಿಬ್ಬಂದಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಆರೋಪಿಗಳು, ಪೊಲೀಸರನ್ನು ನೋಡಿ ಕಾರು ರಿವರ್ಸ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದರು. ಕಾರು ಗಮನಿಸಿದ್ದ ಸಿಬ್ಬಂದಿ ಬೆನ್ನಟ್ಟಿ ನಿಲ್ಲಿಸಿದ್ದರು. ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು, ಕಾರಿನಲ್ಲಿ ಪರಿಶೀಲಿಸಿದಾಗ ರಕ್ತಚಂದನದ ತುಂಡುಗಳು ಪತ್ತೆಯಾದವು’ ಎಂದು ತಿಳಿಸಿದರು.