ಚುನಾವಣೆ ಘೋಷಣೆಯಾದರೆ ಪರೀಕ್ಷೆ ನಡೆಸಲು ಸಾಧ್ಯ ಆಗುವುದಿಲ್ಲ. ಚುನಾವಣೆಯ ನಂತರವೇ ಪರೀಕ್ಷೆ ನಡೆಸಿದರೆ ಮುಂದಿನ ಸೆಮಿಸ್ಟರ್ಗೆ ತೊಂದರೆ ಆಗಲಿದೆ. ಶೈಕ್ಷಣಿಕ ರಚನೆಯೇ ಕುಸಿಯುತ್ತದೆ. ಮುಂದಿನ ವರ್ಷದ ದಾಖಲಾತಿ, ವಿದ್ಯಾರ್ಥಿವೇತನ, ಹಾಸ್ಟೆಲ್ ವ್ಯವಸ್ಥೆ ಎಲ್ಲವೂ ಅಸ್ತವ್ಯಸ್ತ ಆಗಲಿದೆ. ವಿದ್ಯಾರ್ಥಿಗಳ ಭವಿಷ್ಯ, ಶೈಕ್ಷಣಿಕ ಜೀವನವು ದೊಡ್ಡ ಅಪಾಯದಲ್ಲಿ ಸಿಲುಕುತ್ತದೆ ಎಂದು ಹೇಳಿದರು.