ಬೆಂಗಳೂರು: ‘ನಾವು ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜೋತು ಬಿದ್ದಿದ್ದೇವೆ. ಆದರೆ, ಚಾರಿತ್ರಿಕ ಸಂದರ್ಭದಲ್ಲಿ ಕಾನೂನನ್ನು ಎತ್ತಿಹಿಡಿದಿದ್ದ ಅವರು, ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಬದುಕಿನ ಸಂಯಮವನ್ನೂ ಎಲ್ಲರಿಗೂ ಹೇಳಿಕೊಟ್ಟರು. ದಲಿತರಲ್ಲಿ ಇಂತಹ ಸಂಯಮ ಮತ್ತು ನಾಯಕತ್ವದ ಸಾಮರ್ಥ್ಯ ಬೆಳೆಯಬೇಕಿದೆ’ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.