‘ತಮ್ಮ ಮನೆ ಬಳಿ ನೀರು ನಿಲ್ಲುವುದನ್ನು ತಪ್ಪಿಸಲು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿನ ರಸ್ತೆಯನ್ನು 20 ದಿನಗಳ ಹಿಂದೆ ಅಗೆದಿದ್ದಾರೆ. ಆ ನೀರು ಈಗ ಇನ್ನೊಂದು ನಿವೇಶನವನ್ನು ಸೇರುತ್ತಿದೆ. ರಸ್ತೆ ಅಗೆವಾಗಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೆವು. ಅಗೆದ ರಸ್ತೆಗೆ ಕಾಂಕ್ರೀಟ್ ರಿಂಗ್ಗಳನ್ನು ಅಳವಡಿಸಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಇದಾಗಿ ಎರಡು ವಾರಗಳು ಕಳೆದರೂ ಅವರು ರಸ್ತೆಯನ್ನು ದುರಸ್ತಿಪಡಿಸಿಲ್ಲ. ನಮ್ಮ ವಾಹನಗಳ ಓಡಾಟಕ್ಕೆ ಇದರಿಂದ ಅಡ್ಡಿಯಾಗಿದೆ’ ಎಂದು ಬಡಾವಣೆಯ ನಿವಾಸಿ ರಘುಪಾಲ್ ಮುಳಿಯ ದೂರಿದರು.