‘ಸುಮಾರು 100 ಕಿ.ಮೀ. ದೂರದ ಕಾವೇರಿ ನದಿಯಿಂದ ನೀರು ಪಡೆಯುತ್ತಿದ್ದೇವೆ. ಇದರ ಮೇಲಿನ ಅವಲಂಬನೆ ತಗ್ಗಬೇಕೆಂದರೆ ಮಳೆ ನೀರು ಸಂಗ್ರಹ ಅತಿ ಅಗತ್ಯ. ಒಂದು ಸಾವಿರ ಲೀಟರ್ ನೀರನ್ನು ಶುದ್ಧೀಕರಿಸಿ ಜನರಿಗೆ ನೀಡಲು ₹90 ಖರ್ಚಾಗುತ್ತದೆ. ಆದರೆ, ನಾವು ಜನರಿಂದ ಶುಲ್ಕದ ರೂಪದಲ್ಲಿ ₹41 ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ಆದಾಗ್ಯೂ, ಶೇ 5ರಷ್ಟು ರಿಯಾಯಿತಿ ಘೋಷಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಹೇಳಿದರು.