ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ್ಕುಮಾರ್, ‘ವರ್ಣಮಾಲೆಯಿಂದ ಆರಂಭಿಸಿ ಶಾಸನ, ಹಳೆಗನ್ನಡ, ಕಾವ್ಯ, ಛಂದಸ್ಸು, ಆಧುನಿಕ ಸಾಹಿತ್ಯವನ್ನು ಸಮಗ್ರವಾಗಿ ಪರಿಚಯಿಸುವ ಗ್ರಂಥ ಇದಾಗಿದೆ. ವಚನಕಾರರು ಹಾಗೂ ಅವರು ಬರೆದ ವಚನಗಳ ಅಧಿಕೃತ ಪಟ್ಟಿಯೂ ಇಲ್ಲಿದೆ. ಅಲಕ್ಷಿತ ವಚನಕಾರರ ಬಗ್ಗೆಯೂ ವಿಶೇಷ ಆಸ್ಥೆಯಿಂದ ಅಧ್ಯಯನ ನಡೆಸಿ ಪುಸ್ತಕದಲ್ಲಿ ವಿವರಿಸಿದ್ದಾರೆ’ ಎಂದರು.