‘ಬಿಎಂಶ್ರೀ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತಂದರು. ಎಲ್ಲರಿಗೂ ಇಂಗ್ಲಿಷ್ ಕಲಿಸಲು ಶುರು ಮಾಡಿದರು. ಆದರೆ, ಕುವೆಂಪು, ಗೋವಿಂದ ಪೈ ಹಾಗೂ ಬಿ.ಪುಟ್ಟಸ್ವಾಮಯ್ಯ ಅವರು ಮೊದಲ ಬಾರಿಗೆ ನಮ್ಮ ನೆಲದ ಅಸ್ಮಿತೆಯ ಕುರಿತು ಬರೆದರು. ನಮ್ಮ ಸಾಮಾಜಿಕ ಬದುಕು, ನಮ್ಮ ಅರಣ್ಯ ಪ್ರದೇಶ, ನಮ್ಮ ಸಮಸ್ಯೆಗಳು ಇವರ ಬರಹದ ವಸ್ತುವಾದವು’ ಎಂದು ಹೇಳಿದರು.