‘ಬಿಇಎಲ್ ಬಡಾವಣೆಯಲ್ಲಿ ವಾಸವಿದ್ದ ಅನಿಲ್ಕುಮಾರ್, ಬಿಎಂಡಬ್ಲ್ಯೂ ಬೈಕ್ನಲ್ಲಿ ಹೊರಟಿದ್ದರು. ರಸ್ತೆಯಲ್ಲಿ ಕೇಬಲ್ ಸುರುಳಿ ತುಂಡಾಗಿ ಬಿದ್ದಿತ್ತು. ವೇಗವಾಗಿ ಹೊರಟಿದ್ದ ಬೈಕ್ನ ಚಕ್ರಕ್ಕೆ ಕೇಬಲ್ ಸಿಲು ಕಿತ್ತು. ಅನಿಲ್ಕುಮಾರ್ ಅವರ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸ್ ಮೂಲ ಗಳು ಹೇಳಿವೆ. ಕೇಬಲ್ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ‘ಎಲ್ಲೆಂದರಲ್ಲಿ ಕೇಬಲ್ ಬೀಳು ತ್ತಿವೆ. ಕೇಬಲ್ನಿಂದಾಗಿ ವೃದ್ಧರು, ಮಕ್ಕಳು ಅಪಾಯಕ್ಕೆ ಸಿಲುಕು ತ್ತಿದ್ದಾರೆ. ಕೇಬಲ್ ತೆರವಿಗೆ ಬಿಬಿ ಎಂಪಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದರು.