ದಾಸನಪುರದ ಹಾರ್ವರ್ಡ್ ಶಾಲೆಯಲ್ಲಿ ರಾಜ್ಯೋತ್ಸವ ಮತ್ತು ಗಾಂಧೀಜಿ 150ನೇ ಜನ್ಮದಿನ ಉದ್ಘಾಟಿಸಿ ಮಾತನಾಡಿದ ಅವರು, ‘ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸಂಸತ್ ಕಲಾಪಗಳು ಪ್ರತಿಷ್ಠೆ, ಗಲಾಟೆ, ಸಭಾತ್ಯಾಗಕ್ಕೆ ಮೀಸಲಾಗಿವೆ. ವ್ಯವಸ್ಥೆ ಬದಲಿಸುವುದು ಇಂದಿನ ಅಗತ್ಯ. ಸಾಮಾಜಿಕ ಮೌಲ್ಯ ಉಳ್ಳವರು ರಾಜಕೀಯಕ್ಕೆ ಬರಬೇಕಿದೆ ಎಂದರು.