‘ನನಗೆ ಕರೆ ಮಾಡಿದ್ದ ಶಶಿಕಲಾ, ರೇಷ್ಮೆ ಸೀರೆ ಬೇಕೆಂದು ಹೇಳಿದ್ದರು. 300 ರೇಷ್ಮೆ ಸೀರೆಗಳನ್ನು ತೆಗೆದುಕೊಂಡುಚೌಡೇಶ್ವರಿ ಲೇಔಟ್ಗೆ ಹೋಗಿದ್ದೆ. ಹಣ ತರುವುದಾಗಿ ಹೇಳಿ ಸೀರೆ ಸಮೇತ ಹೋದ ಆರೋಪಿಗಳು, ರಾತ್ರಿಯಾದರೂ ವಾಪಸು ಬಂದಿರಲಿಲ್ಲ. ಕರೆ ಮಾಡಿ ಕೇಳಿದಾಗ ನಾಳೆ ಬರುವಂತೆ ಹೇಳಿದ್ದರು. ಮರುದಿನ ಹೋದಾಗ ಹಣ ಕೊಡುವುದಿಲ್ಲವೆಂದು ಹೇಳಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಕೃಷ್ಣ ಹೇಳಿದ್ದಾರೆ.