ಶಾಸಕಿ ಸೌಮ್ಯಾರೆಡ್ಡಿ, ಐಪಿಎಸ್ ಅಧಿಕಾರಿ ಡಿ.ರೂಪಾ, ತೃತೀಯ ಲಿಂಗಿಗಳ ಪರ ಹೋರಾಟಗಾರ್ತಿ ಚಾಂದಿನಿ, ಮಿಂಟೋ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್, ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ಗೀತಾ ಶಿವಮೂರ್ತಿ, ಸಾಹಿತಿ ಕೆ.ಷರೀಫಾ, ಹೋರಾಟಗಾರ್ತಿ ವಿನುತಾ ಮೂಲ, ಜಾನಪದ ಗಾಯಕಿ ವಡ್ಡಗೆರೆ ಕದಿರಮ್ಮ, ಪತ್ರಕರ್ತೆ ಶಶಿಕಲಾ, ರಂಗಕರ್ಮಿ ರಾಜೇಶ್ವರಿ, ಮನೋರಂಜನಿ, ಅನಾಥ ಶಾವಗಳನ್ನು ಸಂಸ್ಕಾರ ಮಾಡುವ ಸಾಮಾಜಿಕ ಕಾರ್ಯಕರ್ತೆ ಆಶಾ, ಶಿಕ್ಷಕಿ ಹರ್ಷಿಯಾ ಬಾನು, ಕ್ರೀಡಾಪಟುಗಳಾದ ದೀಪಿಕಾ, ಎನ್. ಸುನೈನಾ, ಬಿಎಂಟಿಸಿ ಚಾಲಕಿ ಪ್ರೇಮಾ ರಾಮಪ್ಪ ನಡಬಟ್ಟಿ, ಬುಡಕಟ್ಟು ಸಮುದಾಯಗಳ ಪರ ಹೋರಾಟಗಾರ್ತಿ ಎನ್. ವರಲಕ್ಷ್ಮಿ, ನಿರೂಪಕಿ ರೇಣುಕಾ, ಮಂಜುಳಾ ಕೊಂಡರಾಜನಹಳ್ಳಿ, ಉಪನ್ಯಾಸಕಿ ಪ್ರೇಮಪಲ್ಲವಿ, ಬೆಸ್ಕಾಂ ಲೈನ್ ವುಮನ್ ಟಿ. ಕಾವ್ಯಾ ಅವರಿಗೆ ಸಾವಿತ್ರಿಬಾ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.