ನೆಲಮಂಗಲ: ‘ಶಿಸ್ತಿನ ಜೀವನ, ಕೆಲಸದಲ್ಲಿ ಹೊಸತನ ಮತ್ತು ಕೌಶಲಗಳನ್ನು ಅಳವಡಿಸಿಕೊಂಡರೆ ಯಶಸ್ವಿ ಉದ್ಯಮಿಯಾಗಬಹುದು’ ಎಂದು ರುಡ್ಸೆಟ್ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಜನಾರ್ದನ್ ಹೇಳಿದರು.
ತಾಲ್ಲೂಕಿನ ಅರಿಶಿನಕುಂಟೆಯ ರುಡ್ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಯುವ ಕೌಶಲ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರುಡ್ಸೆಟ್ ನಿರ್ದೇಶಕ ಎಂ.ಎಂ.ವೀರೇಂದ್ರಕುಮಾರ್, ನಿವೃತ್ತ ನಿರ್ದೇಶಕ ಆರ್.ಶಿವಣ್ಣ, ಪ್ರಾಧ್ಯಾಪಕ ಉದಯ್ಕುಮಾರ್, ಧರ್ಮಸ್ಥಳದ ಜನಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ವಿ.ರಾಮಸ್ವಾಮಿ, ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಇದ್ದರು.