ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಗರ ಜಿಲ್ಲೆಯ ಉಪ ನಿರ್ದೇಶಕ ಸಿದ್ದರಾಮಣ್ಣ ಅವರು ಮಾತನಾಡಿ, ‘ವಿಶ್ವ ಸಮಾಜಕಾರ್ಯ ದಿನದಂದು ವಿದ್ಯಾರ್ಥಿಗಳು ತಮ್ಮನ್ನು ತಾವು ಸಮರ್ಥ ಸಮಾಜ ಕಾರ್ಯಕರ್ತರನ್ನಾಗಿ ರೂಪಿಸಿಕೊಳ್ಳಲು ಪಣತೊಡಬೇಕು. ಸಮಾಜ ಕಾರ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಿಫಲ ಉದ್ಯೋಗ ಅವಕಾಶವಿದ್ದು, ಸಮಾಜ ನಿರ್ಮಾಣದ ಆ ಮೂಲಕ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ನಿಭಾಯಿಸಲು ಸಜ್ಜಾಗಬೇಕು’ ಎಂದು ಕರೆ ನೀಡಿದರು.