‘ಎರಡನೇ ಆವೃತ್ತಿಯಲ್ಲಿನ ಕಥೆಗಳಿಗೆ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರು ಧ್ವನಿ ನೀಡಿದ್ದಾರೆ. ಕುವೆಂಪು ಅವರ ‘ಯಾರೂ ಅರಿಯದ ವೀರ’ ಕಥೆಗೆ ನಟ ವಸಿಷ್ಠ ಸಿಂಹ ಧ್ವನಿ ನೀಡಿದ್ದಾರೆ. ದೇವನೂರ ಮಹಾದೇವ ಅವರ ‘ಡಾಂಬರು ಬಂದದು’ ಕಥೆಯು ನಟ ಧನಂಜಯ ಅವರ ಧ್ವನಿಯಲ್ಲಿ, ವೈದೇಹಿ ಅವರ ‘ಒಗಟು’ ಕಥೆಯು ಶ್ರುತಿಹರಿಹರನ್ ಧ್ವನಿಯಲ್ಲಿ, ವಿವೇಕ್ ಶಾನಭಾಗ್ ಅವರ`ನಿರ್ವಾಣ' ಕಥೆಯು ನಟ ಅಚ್ಯುತ್ ಕುಮಾರ್ ಧ್ವನಿಯಲ್ಲಿ ಮೂಡಿಬಂದಿದೆ. ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ನಟ ರಾಜ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಕಥೆಗಳಿಗೆ ಕಂಠ ದಾನ ಮಾಡಿದ್ದಾರೆ’ ಎಂದು ಕೇಳು ಕಥೆಯ ಆಡಿಯೋ ಬುಕ್ ಸಂಸ್ಥೆಯ ಸಂಸ್ಥಾಪಕ ಮುಕುಂದ ಸೆಟ್ಲೂರ್ ತಿಳಿಸಿದರು.