ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‍ಲೈನ್ ಮೂಲಕ ಗ್ರಹಣ ವೀಕ್ಷಣೆ ವ್ಯವಸ್ಥೆ

Last Updated 17 ಜೂನ್ 2020, 16:48 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 21ರಂದು ಸಂಭವಿಸಲಿರುವ ಸೂರ್ಯಗ್ರಹಣ ವೀಕ್ಷಣೆಗೆ ಲಾಕ್‌ಡೌನ್‌ನಿಂದಾಗಿ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ವ್ಯವಸ್ಥೆ ಇರುವುದಿಲ್ಲ. ಬದಲಿಗೆ ಆನ್‍ಲೈನ್ ಮೂಲಕ ಗ್ರಹಣ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು www.taralaya.org ಮೂಲಕ ಸಂಸ್ಥೆಯ ಯೂಟ್ಯೂಬ್ ಹಾಗೂ ಫೇಸ್‍ಬುಕ್ ಪುಟಗಳಿಂದ ಗ್ರಹಣ ವೀಕ್ಷಿಸಬಹುದು. ಬೆಳಿಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಬೆಂಗಳೂರಿನಲ್ಲಿ ಗ್ರಹಣ ಗೋಚರಿಸಲಿದೆ.

ಗ್ರಹಣ ವೀಕ್ಷಿಸುವವರು ತಾರಾಲಯದ ಪುಸ್ತಕ ಮಳಿಗೆಯಲ್ಲಿ ₹35 ಪಾವತಿಸಿ, ಎರಡು ಸೌರ ಕನ್ನಡಕಗಳನ್ನು ಖರೀದಿಸಬಹುದು. ಜೂ.18ರಿಂದ 20ರವರೆಗೆ ಸೌರ ಕನ್ನಡಕಗಳ ಮಾರಾಟ ಇರಲಿದೆ.

ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ವಿಜಯನಗರ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾರ್ಯನಿರ್ವಹಣೆ ಇರುವುದರಿಂದ ಇದೇ 19ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಹೊಸಹಳ್ಳಿ, ವಿಜಯನಗರ, ಗೋವಿಂದರಾಜನಗರ, ಮಾರೇನಹಳ್ಳಿ, ವಿನಾಯಕ ಬಡಾವಣೆ, ಕಾವೇರಿಪುರ, ನಾಗರಬಾವಿ, ತಿಮ್ಮೇನಹಳ್ಳಿ, ಪ್ರಶಾಂತನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಸಿದ್ಧಯ್ಯ ಪುರಾಣಿಕ ರಸ್ತೆ, ಅಗ್ರಹಾರ ದಾಸರಹಳ್ಳಿ, ಬಿಇಎಂಎಲ್ ಬಡಾವಣೆ, ಬಸವೇಶ್ವರನಗರ, ಹಾವನೂರು ವೃತ್ತ, ಶಕ್ತಿಗಣಪತಿ ನಗರ, ಮಂಜುನಾಥನಗರ, ಚನ್ನಿಗಪ್ಪ ಬಡಾವಣೆ, ಶಾರದ ಕಾಲೊನಿ, ಮೀನಾಕ್ಷಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ವಲಸೆ ಕಾರ್ಮಿಕರ ಸಮೀಕ್ಷೆ

ಬೆಂಗಳೂರು: ರಾಜ್ಯ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ನಗರದ ಕೈಗಾರಿಕೆಗಳು ಹಾಗೂ ಸೇವಾ ವಲಯಗಳಲ್ಲಿ ಎದುರಾಗಿರುವ ವಲಸೆ ಕಾರ್ಮಿಕರ ಕೊರತೆ ನೀಗಿಸಲು ಸಮೀಕ್ಷೆ ಕೈಗೊಳ್ಳಲಾಗಿದೆ.

ನಗರ ಜಿಲ್ಲಾ ವ್ಯಾಪ್ತಿಗೆ ಬರುವ ಬೃಹತ್ ಕೈಗಾರಿಕೆ, ಮಧ್ಯಮ ಕೈಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಸೇವಾವಲಯಗಳು ತಮ್ಮ ಸಂಸ್ಥೆಯಲ್ಲಿರುವ ಕಾರ್ಮಿಕರ ಕೊರತೆ ಹಾಗೂ ಅಗತ್ಯವಿರುವ ಕಾರ್ಮಿಕರು, ಉದ್ಯೋಗಿಗಳ ಮಾಹಿತಿಯನ್ನು https://migrantkar.kaushalkar.com ವೆಬ್‍ಸೈಟ್‍ನಲ್ಲಿ ದಾಖಲಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT