ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಅನೇಕಲ್ ಘಟಕ, ಪ್ರಜಾತಾರೆ ಬಳಗ, ಗಂಧದ ನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನದ ಸಹಯೋಗದಲ್ಲಿ ’ಕಥಾ ಸಮಯ‘ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸಲಾಗಿದೆ.
45 ವರ್ಷದೊಳಗಿನವರು ಮಾತ್ರ ಕಥೆ ಕಳುಹಿಸಬಹುದು. ಸ್ಪರ್ಧೆಗೆ ಕಳುಹಿಸುವ ಕಥೆ ಸಾಮಾಜಿಕ ಜಾಲತಾಣ ಸೇರಿ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು. ಬಹುಮಾನಿತ ಕಥೆಗಳನ್ನೂ ಒಳಗೊಂಡಂತೆ ಆಯ್ದ ಮೊದಲ 20 ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಮೊದಲ ಮೂರು ಅತ್ಯುತ್ತಮ ಕಥೆಗಳಿಗೆ ತಲಾ ₹10ಸಾವಿರ ಬಹುಮಾನ ನೀಡಲಾಗುವುದು. ಆಸಕ್ತರು ನವೆಂಬರ್ 1ರೊಳಗೆ anekalkathasparde@gmail.comಗೆ ಇ–ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 7795212012/9380697082ಗೆ ಸಂಪರ್ಕಿಸಿ.