ಸಾರ್ವಜನಿಕ ದೂರಿನ ಮೇರೆಗೆ ಯಲಹಂಕದ ಅಶ್ವಿನಿ ಆಸ್ಪತ್ರೆ, ಅಪೂರ್ವ ಚೈಲ್ಡ್ ಆಸ್ಪತ್ರೆ, ಸಿ.ವೈ.ಟಿ. ಆಸ್ಪತ್ರೆ, ನವಚೇತನ ಹಾಗೂ ಕೆ.ಕೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕರಿಂದ ಪಡೆಯುತ್ತಿರುವುದು ಕಂಡು ಬಂದ ಕಾರಣ ಈ ಆಸ್ಪತ್ರೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದರು.