’ಶನಿವಾರ ಬೆಳಿಗ್ಗೆ ತಾಯಿ ಎಂದಿನಂತೆ ಮನೆಗೆಲಸಕ್ಕೆ ಹೋಗಿದ್ದರು. ರಾಜು ಮನೆಯಲ್ಲೇ ಇದ್ದರು. ಬೆಳಿಗ್ಗೆ 11.30 ಗಂಟೆ ಸುಮಾರಿಗೆ ತಾಯಿ ಮನೆಗೆ ವಾಪಸ್ ಬಂದಾಗ, ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದು ಗೊತ್ತಾಗಿತ್ತು. ಎಷ್ಟೇ ಬಡಿದರೂ ಮಗ ಬಾಗಿಲು ತೆರೆದಿರಲಿಲ್ಲ. ಆತಂಕಗೊಂಡ ತಾಯಿ ಸ್ಥಳೀಯರ ಸಹಾಯದಿಂದ ಬಾಗಿಲಿನ ಲಾಕ್ ಮುರಿದು ನೋಡಿದಾಗಲೇ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ’ ಎಂದು ವಿವರಿಸಿದರು.