ಬೆಂಗಳೂರು: ಸುರಂಜನ್ ದಾಸ್ ರಸ್ತೆಯಲ್ಲಿ ಅಂಡರ್ಪಾಸ್ ನಿರ್ಮಾಣ ಉದ್ದೇಶಕ್ಕೆ ಮರಗಳನ್ನು ಕಡಿಯದಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮರ ಕಡಿಯಲು ಬಿಬಿಎಂಪಿ ಹೊರಡಿಸಿರುವ ಕಚೇರಿ ಸುತ್ತೋಲೆ ರದ್ದುಪಡಿಸುವಂತೆ ಕೋರಿ ಸ್ವಾತಿ ದಾಮೋದರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕಮಾಂಡೋ ಆಸ್ಪತ್ರೆಯಿಂದ ಹೋಪ್ ಫಾರ್ಮ್ ತನಕ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣಕ್ಕಾಗಿ ಅಂಡರ್ ಪಾಸ್ ನಿರ್ಮಾಣ ಮಾಡುವ ಉದ್ದೇಶ ಇದೆ. ಅದಕ್ಕಾಗಿ 25 ಮರಗಳನ್ನು ಕಡಿಯುವಂತೆ ಬಿಬಿಎಂಪಿ 2020ರ ಡಿಸೆಂಬರ್ 18ರಂದು ಸುತ್ತೋಲೆ ಹೊರಡಿಸಿತ್ತು.