‘ಮೃದಂಗ, ತಬಲ, ಖಂಜಿರಾ, ಚೆಂಡೆ ಮತ್ತಿತರ ಚರ್ಮ ವಾದ್ಯಗಳನ್ನು ನುಡಿಸುವವರಲ್ಲಿ ಮೇಲ್ವರ್ಗದವರೇ ಹೆಚ್ಚು. ಆದರೆ, ಈ ವಾದ್ಯಗಳ ತಯಾರಕರು ದಲಿತರು ಮತ್ತು ಕೆಳಸ್ತರದ ಸಮುದಾಯಗಳ ಜನರು. ಸಂಗೀತ ಕಾರ್ಯಕ್ರಮಗಳಲ್ಲಿ ಕಲಾವಿದ ಮತ್ತು ಆತನ ಗುರುವಿಗೆ ಗೌರವ ದೊರೆಯುತ್ತದೆ. ಆದರೆ, ಇಂಪಾದ ದನಿ ಹೊಮ್ಮಿಸುವ ವಾದ್ಯವನ್ನು ರೂಪಿಸಿದ ವ್ಯಕ್ತಿಗಳು ತೆರೆಯ ಮರೆಯಲ್ಲೇ ಉಳಿದುಬಿಡುತ್ತಾರೆ’ ಎಂದರು.