ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿನಗರ ವಿಭಾಗಗಳ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳಲ್ಲಿ ಕೆಲವು ಅಧೀಕಾರಿಗಳು ತಪ್ಪೆಸಗಿದ್ದು ಸಾಬೀತಾಗಿದೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ನಾಗಮೋಹನದಾಸ್ ಸಮಿತಿ ಶಿಫಾರಸು ಮಾಡಿತ್ತು. ಆರೋಪ ಸಾಬೀತಾದ ಅಧೀಕಾರಿಗಳಲ್ಲಿ ಬಿಬಿಎಂಪಿಯ ಸಹಾಯಕ ಎಂಜಿನಿಯರ್ಗಳಾದ ಡಿ. ಹರೀಶ್ಕುಮಾರ್, ವಿ. ಮೋಹನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳಾದ ಜಿ.ಆರ್. ಕುಮಾರ್ ಹಾಗೂ ಎನ್.ಎಸ್. ರೇವಣ್ಣ ಅವರೂ ಸೇರಿದ್ದರು. ಈ ನಾಲ್ವರ ಸೇವೆಯನ್ನು ಆಡಳಿತ ನ್ಯಾಯಮಂಡಳಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಬಿಬಿಎಂಪಿಯಲ್ಲಿ ಮುಂದುವರಿಸುವಂತೆ ಅಥವಾ ನಿಯೋಜಿಸುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ 2020ರ ಆ.19ರಂದು ಪತ್ರ ಬರೆದಿತ್ತು.