ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ತೇಜಸ್ವಿನಿ ಅವರ ಹೆಸರನ್ನು ರಾಜ್ಯ ಘಟಕದ ಶಿಫಾರಸು ಮಾಡಿತ್ತು. ಆದರೆ, ಯುವ ಮುಂದಾಳು ತೇಜಸ್ವಿ ಸೂರ್ಯ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಕೇಂದ್ರ ನಾಯಕರು ಯಾವುದೇ ಮಾಹಿತಿ ನೀಡದೆ, ಸೌಜನ್ಯಕ್ಕೂ ತಿಳಿಸದೆ ಟಿಕೆಟ್ ನಿರಾಕರಣೆ ಮಾಡಿದ್ದಾರೆ ಎಂದು ತೇಜಸ್ವಿನಿ ಅಸಮಾಧಾನ ವ್ಯಕ್ತಪಡಿಸಿದ್ದರು.