ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಚುನಾವಣೆ ಸ್ಪರ್ಧಿಸುವಂತೆ ಒತ್ತಾಯಿಸಿ ಪ್ರಚಾರಕ್ಕೆ ಇಳಿಸಿದರು. ಆದರೆ, ಟಿಕೆಟ್ ನೀಡಿದ್ದು ತೇಜಸ್ವಿ ಸೂರ್ಯ ಅವರಿಗೆ. ಬಳಿಕ ತೇಜಸ್ವಿನಿ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಿದರೂ, ಅವರ ಪ್ರತಿಭೆಯನ್ನು ಬಳಸಿಕೊಳ್ಳಲಿಲ್ಲ. ಬಿ.ಎಲ್.ಸಂತೋಷ್ ಅವರ ಕಾರಣಕ್ಕೆ ಟಿಕೆಟ್ನಿಂದ ವಂಚಿತರಾಗಿದ್ದೂ ಅಲ್ಲದೆ, ರಾಜಕೀಯವಾಗಿ ಮೂಲೆಗುಂಪು ಮಾಡಲಾಗಿದೆ ಎಂದು ಬಿಜೆಪಿಯ ಒಂದು ವಲಯ ಭಾವಿಸಿದೆ. ಇವೆಲ್ಲವೂ ಮತ್ತೆ ಮುನ್ನೆಲೆಗೆ ಬರಲು ಟ್ವೀಟ್ಕಾರಣವಾಗಿದೆ.