‘ಮಾಹಿತಿಯ ಕೊರತೆಯಿಂದಾಗಿ ಟ್ಯಾಂಕರ್ ಮಾಲೀಕರು ಟೆಂಡರ್ನಲ್ಲಿ ಭಾವಗಹಿಸಿಲ್ಲ ಎಂಬುದು ಸುಳ್ಳು. ಅನೇಕರು ಟೆಂಡರ್ ಬಗ್ಗೆ ನಮ್ಮಬಳಿ ವಿಚಾರಿಸಿದ್ದರು. ಪಾಲಿಕೆ ವತಿ ಯಿಂದಲೇ ಉಚಿತವಾಗಿ ನೀರು ಪೂರೈಕೆ ಆದರೆ, ಜನರಿಂದ ಮನಬಂದಂತೆ ದುಡ್ಡು ವಸೂಲಿ ಮಾಡಲು ಆಗುವುದಿಲ್ಲ. ನೀರಿನ ಹೆಸರಿನಲ್ಲಿ ನಡೆಯುತ್ತಿರುವ ದಂದೆಗೂ ಕಡಿವಾಣ ಬೀಳುತ್ತದೆ. ಹಾಗಾಗಿ ಅವರೆಲ್ಲ ಒಂದಾಗಿ
ಟೆಂಡರ್ ಪ್ರಕ್ರಿಯೆಯಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.