ಈ ಶಿಲಾಶಾಸನದ ಪಾಠವನ್ನು ಶಾಸನ ತಜ್ಞರಾದ ಪ್ರೊ.ಕೆ.ಆರ್.ನರಸಿಂಹನ್ ಮತ್ತು ಡಾ.ಪಿ.ವಿ.ಕೃಷ್ಣಮೂರ್ತಿ ಅವರು ಓದಿಕೊಟ್ಟಿದ್ದಾರೆ. ಧನಪಾಲ್ ಅವರ ಜೊತೆಗೆ ಶಾಸನವನ್ನು ಶೋಧಿಸಿದವರಲ್ಲಿ ಸಂಶೋಧನಾ ವಿದ್ಯಾರ್ಥಿ ಆರ್. ಯುವರಾಜ್ ಸಹ ಇದ್ದರು.ಶಾಸನವನ್ನು ಹೊರತೆಗೆಯಲು ಗ್ರಾಮಸ್ಥರಾದ ಜಯರಾಮಯ್ಯ, ನರಸಿಂಹಮೂರ್ತಿ, ನಾಗೇಶ್, ಶ್ರೀನಿವಾಸ್ ನೆರವಾದರೆಂದು ಧನಪಾಲ್ ಸ್ಮರಿಸುತ್ತಾರೆ.