<p><strong>ಕೆ.ಆರ್.ಪುರ:</strong> ‘ಕೆ.ಆರ್.ಪುರ ಮಾರುಕಟ್ಟೆಗೆ ಕಾನೂನು ಬದ್ದವಾಗಿ ಟೆಂಡರ್ ಪಡೆದು ಸುಂಕ ವಸೂಲು ಮಾಡುತ್ತಿದ್ದರೂ ಕೆಲವರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಗುತ್ತಿಗೆದಾರ ಅಂಜನ್ ಮೂರ್ತಿ ಅವರು ವ್ಯಾಪಾರಿಗಳು, ಆಟೊ ಚಾಲಕರೊಂದಿಗೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.</p>.<p>‘ಬಿಬಿಎಂಪಿ ವ್ಯಾಪ್ತಿಯ ಕೆ.ಆರ್.ಪುರ ಮಾರುಕಟ್ಟೆಗೆ 1 ಎಕರೆ 14 ಗುಂಟೆಗೆ ಟೆಂಡರ್ ಕರೆಯಲಾಗಿತ್ತು. ಈ ವೇಳೆ ₹9.81 ಲಕ್ಷಕ್ಕೆ ಟೆಂಡರ್ ನನ್ನ ಪಾಲಾಗಿರುತ್ತದೆ. ಮುಂಗಡವಾಗಿ ಮೂರು ತಿಂಗಳ ಹಣವನ್ನು ಠೇವಣಿಯಾಗಿ ಪಾಲಿಕೆಗೆ ಪಾವತಿಸಿ ಕಾನೂನು ರೀತಿಯಲ್ಲಿ ನಿಯಮಾನುಸಾರ ಸುಂಕ ವಸೂಲಿ ಮಾಡುತ್ತಿದ್ದೇನೆ. ಇದನ್ನು ಸಹಿಸದ, ಈ ಹಿಂದೆ ಟೆಂಡರ್ ಪಡೆದಿದ್ದ ಎಲೆ ಶ್ರೀನಿವಾಸ್ ಮತ್ತು ಆತನ ಸಂಗಡಿಗರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ವ್ಯಾಪರಿಗಳ ಮೇಲೆ ನಿಗಾ ಇಡಲು ಪಾಲಿಕೆ ಮತ್ತು ಪೋಲಿಸ್ ಅಧಿಕಾರಿಗಳ ಅನುಮತಿಯಿಲ್ಲದೆ ರಸ್ತೆಗಳಲ್ಲಿ ಅಕ್ರಮವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ತೆರವುಗೊಳಿಸಿ ನ್ಯಾಯ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>‘ಪಾಲಿಕೆ ಮತ್ತು ಪೋಲಿಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಐಟಿಐನಿಂದ ವೆಂಗಯ್ಯನಕೆರೆವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಎರಡು ಬದಿಯ ವ್ಯಾಪಾರಿಗಳಿಗೆ 1 ಎಕರೆ 14 ಗುಂಟೆ ಜಾಗದಲ್ಲಿ ವ್ಯಾಪಾರ ನಡೆಸುವ ವ್ಯವಸ್ಥೆ ಮಾಡಬೇಕು. ಅಕ್ರಮ ಶೆಡ್ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಟೆಂಡರ್ ರದ್ದುಪಡಿಸಿ ಮುಂಗಡ ಹಣ ವಾಪಸು ನೀಡಬೇಕು’ ಎಂದರು.</p>.<p>ವ್ಯಾಪಾರಿಗಳಾದ ಅಸ್ಲಂಬಾಬು, ಅಂಬರೀಶ್, ನಟರಾಜ್, ಕೇಶವ್, ಅಂಜನ್ ಕುಮಾರ್, ಆಟೊ ಘಟಕದ ಮುನಿಕೃಷ್ಣ, ಆನಂದ್ ರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ‘ಕೆ.ಆರ್.ಪುರ ಮಾರುಕಟ್ಟೆಗೆ ಕಾನೂನು ಬದ್ದವಾಗಿ ಟೆಂಡರ್ ಪಡೆದು ಸುಂಕ ವಸೂಲು ಮಾಡುತ್ತಿದ್ದರೂ ಕೆಲವರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಗುತ್ತಿಗೆದಾರ ಅಂಜನ್ ಮೂರ್ತಿ ಅವರು ವ್ಯಾಪಾರಿಗಳು, ಆಟೊ ಚಾಲಕರೊಂದಿಗೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.</p>.<p>‘ಬಿಬಿಎಂಪಿ ವ್ಯಾಪ್ತಿಯ ಕೆ.ಆರ್.ಪುರ ಮಾರುಕಟ್ಟೆಗೆ 1 ಎಕರೆ 14 ಗುಂಟೆಗೆ ಟೆಂಡರ್ ಕರೆಯಲಾಗಿತ್ತು. ಈ ವೇಳೆ ₹9.81 ಲಕ್ಷಕ್ಕೆ ಟೆಂಡರ್ ನನ್ನ ಪಾಲಾಗಿರುತ್ತದೆ. ಮುಂಗಡವಾಗಿ ಮೂರು ತಿಂಗಳ ಹಣವನ್ನು ಠೇವಣಿಯಾಗಿ ಪಾಲಿಕೆಗೆ ಪಾವತಿಸಿ ಕಾನೂನು ರೀತಿಯಲ್ಲಿ ನಿಯಮಾನುಸಾರ ಸುಂಕ ವಸೂಲಿ ಮಾಡುತ್ತಿದ್ದೇನೆ. ಇದನ್ನು ಸಹಿಸದ, ಈ ಹಿಂದೆ ಟೆಂಡರ್ ಪಡೆದಿದ್ದ ಎಲೆ ಶ್ರೀನಿವಾಸ್ ಮತ್ತು ಆತನ ಸಂಗಡಿಗರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ವ್ಯಾಪರಿಗಳ ಮೇಲೆ ನಿಗಾ ಇಡಲು ಪಾಲಿಕೆ ಮತ್ತು ಪೋಲಿಸ್ ಅಧಿಕಾರಿಗಳ ಅನುಮತಿಯಿಲ್ಲದೆ ರಸ್ತೆಗಳಲ್ಲಿ ಅಕ್ರಮವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ತೆರವುಗೊಳಿಸಿ ನ್ಯಾಯ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>‘ಪಾಲಿಕೆ ಮತ್ತು ಪೋಲಿಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಐಟಿಐನಿಂದ ವೆಂಗಯ್ಯನಕೆರೆವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಎರಡು ಬದಿಯ ವ್ಯಾಪಾರಿಗಳಿಗೆ 1 ಎಕರೆ 14 ಗುಂಟೆ ಜಾಗದಲ್ಲಿ ವ್ಯಾಪಾರ ನಡೆಸುವ ವ್ಯವಸ್ಥೆ ಮಾಡಬೇಕು. ಅಕ್ರಮ ಶೆಡ್ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಟೆಂಡರ್ ರದ್ದುಪಡಿಸಿ ಮುಂಗಡ ಹಣ ವಾಪಸು ನೀಡಬೇಕು’ ಎಂದರು.</p>.<p>ವ್ಯಾಪಾರಿಗಳಾದ ಅಸ್ಲಂಬಾಬು, ಅಂಬರೀಶ್, ನಟರಾಜ್, ಕೇಶವ್, ಅಂಜನ್ ಕುಮಾರ್, ಆಟೊ ಘಟಕದ ಮುನಿಕೃಷ್ಣ, ಆನಂದ್ ರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>