‘ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರನ್ನು ಫೆ. 26ರಂದು ಬಸವೇಶ್ವರ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಶಿವಕುಮಾರ್ ಎಂಬಾತ ಚಲಾಯಿಸುತ್ತಿದ್ದ ಆಟೊ, ನಾಗರಾಜ್ ಅವರಿಗೆ ಗುದ್ದಿತ್ತು. 6 ಅಡಿಯಷ್ಟು ಮೇಲಕ್ಕೆ ಹಾರಿ ಬಿದ್ದಿದ್ದ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.