<p><strong>ಬೆಂಗಳೂರು</strong>: ನಿಟ್ಟೂರು–ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ನಲ್ಲಿ ಹಳಿಯಲ್ಲಿ ಗರ್ಡರ್ ಅಳವಡಿಸುವ ಮತ್ತು ತೆಗೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್ 27ರಿಂದ ಜುಲೈ 27ರವರೆಗೆ 8 ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಲವನ್ನು ಭಾಗಶಃ ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.</p>.<p>ತುಮಕೂರು–ಚಾಮರಾಜನಗರ, ಚಾಮರಾಜನಗರ–ಮೈಸೂರು, ಚಾಮರಾಜನಗರ–ಯಶವಂತಪುರ, ಯಶವಂತಪುರ–ಚಾಮರಾಜನಗರ, ತುಮಕೂರು–ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು–ತುಮಕೂರು, ಯಶವಂತಪುರ–ಶಿವಮೊಗ್ಗ, ಶಿವಮೊಗ್ಗ–ಯಶವಂತಪುರ ರೈಲುಗಳನ್ನು ಈ ಅವಧಿಯಲ್ಲಿ ರದ್ದು ಮಾಡಲಾಗಿದೆ.</p>.<p>ಕೆಎಸ್ಆರ್ ಬೆಂಗಳೂರು–ತುಮಕೂರು–ಕೆಎಸ್ಆರ್ ಬೆಂಗಳೂರು ರೈಲುಗಳನ್ನು ಹಿರೇಹಳ್ಳಿ–ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ರೈಲು, ಕೆಎಸ್ಆರ್ ಬೆಂಗಳೂರು–ಧಾರವಾಡ–ಕೆಎಸ್ಆರ್ ಬೆಂಗಳೂರು ರೈಲುಗಳು ಅರಸೀಕರೆ–ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.</p>.<p>ವಾಸ್ಕೊ ಡ ಗಾಮ–ಯಶವಂತಪುರ ರೈಲು, ಮೈಸೂರು– ವಾರಾಣಸಿ, ಯಶವಂತಪುರ–ಜೈಪುರ, ಮೈಸೂರು–ಬೆಳಗಾವಿ ರೈಲುಗಳು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ. ಮೈಸೂರು–ಉದಯಪುರ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ, ದಾವಣಗೆರೆಗೆ ತೆರಳಲಿದೆ.</p>.<p>ಯಶವಂತಪುರ–ಎಚ್. ನಿಜಾಮುದ್ದೀನ್, ಕೆಎಸ್ಆರ್ ಬೆಂಗಳೂರು–ತಾಳಗುಪ್ಪ, ಬೆಳಗಾವಿ–ಮೈಸೂರು, ಚಾಮರಾಜನಗರ–ತುಮಕೂರು, ಯಶವಂತಪುರ–ವಾಸ್ಕೊ ಡ ಗಾಮ, ತುಮಕೂರು–ಶಿವಮೊಗ್ಗ ರೈಲುಗಳ ಸಮಯವನ್ನು ಮರುನಿಗದಿ ಮಾಡಲಾಗಿದೆ. ಈ ರೈಲುಗಳು ತಡವಾಗಿ ಚಲಿಸಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಿಟ್ಟೂರು–ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ನಲ್ಲಿ ಹಳಿಯಲ್ಲಿ ಗರ್ಡರ್ ಅಳವಡಿಸುವ ಮತ್ತು ತೆಗೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್ 27ರಿಂದ ಜುಲೈ 27ರವರೆಗೆ 8 ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಲವನ್ನು ಭಾಗಶಃ ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.</p>.<p>ತುಮಕೂರು–ಚಾಮರಾಜನಗರ, ಚಾಮರಾಜನಗರ–ಮೈಸೂರು, ಚಾಮರಾಜನಗರ–ಯಶವಂತಪುರ, ಯಶವಂತಪುರ–ಚಾಮರಾಜನಗರ, ತುಮಕೂರು–ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು–ತುಮಕೂರು, ಯಶವಂತಪುರ–ಶಿವಮೊಗ್ಗ, ಶಿವಮೊಗ್ಗ–ಯಶವಂತಪುರ ರೈಲುಗಳನ್ನು ಈ ಅವಧಿಯಲ್ಲಿ ರದ್ದು ಮಾಡಲಾಗಿದೆ.</p>.<p>ಕೆಎಸ್ಆರ್ ಬೆಂಗಳೂರು–ತುಮಕೂರು–ಕೆಎಸ್ಆರ್ ಬೆಂಗಳೂರು ರೈಲುಗಳನ್ನು ಹಿರೇಹಳ್ಳಿ–ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ರೈಲು, ಕೆಎಸ್ಆರ್ ಬೆಂಗಳೂರು–ಧಾರವಾಡ–ಕೆಎಸ್ಆರ್ ಬೆಂಗಳೂರು ರೈಲುಗಳು ಅರಸೀಕರೆ–ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.</p>.<p>ವಾಸ್ಕೊ ಡ ಗಾಮ–ಯಶವಂತಪುರ ರೈಲು, ಮೈಸೂರು– ವಾರಾಣಸಿ, ಯಶವಂತಪುರ–ಜೈಪುರ, ಮೈಸೂರು–ಬೆಳಗಾವಿ ರೈಲುಗಳು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ. ಮೈಸೂರು–ಉದಯಪುರ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ, ದಾವಣಗೆರೆಗೆ ತೆರಳಲಿದೆ.</p>.<p>ಯಶವಂತಪುರ–ಎಚ್. ನಿಜಾಮುದ್ದೀನ್, ಕೆಎಸ್ಆರ್ ಬೆಂಗಳೂರು–ತಾಳಗುಪ್ಪ, ಬೆಳಗಾವಿ–ಮೈಸೂರು, ಚಾಮರಾಜನಗರ–ತುಮಕೂರು, ಯಶವಂತಪುರ–ವಾಸ್ಕೊ ಡ ಗಾಮ, ತುಮಕೂರು–ಶಿವಮೊಗ್ಗ ರೈಲುಗಳ ಸಮಯವನ್ನು ಮರುನಿಗದಿ ಮಾಡಲಾಗಿದೆ. ಈ ರೈಲುಗಳು ತಡವಾಗಿ ಚಲಿಸಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>