ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ‘ಸಂವಿಧಾನವು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಮಹತ್ವದ ಕೊಡುಗೆ. ಅದರ ಆಶಯಗಳ ಮೇಲೆ ಇತ್ತೀಚಿಗೆ ಆಕ್ರಮಣ ನಡೆಯುತ್ತಿದೆ. ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಅದನ್ನು ಕಳೆದುಕೊಂಡರೆ ಪಟೇಲರು, ಜಮೀನ್ದಾರರು ಮಾತ್ರ ಇರುತ್ತಾರೆ. ಉಳಿದವರು ಕೂಲಿಕಾರ್ಮಿಕರಾಗಿ ಉಳಿಯುತ್ತಾರೆ’ ಎಂದರು.