ಬೆಂಗಳೂರು: ‘ಜ್ಞಾನದ ಬೆಳಕಾದ ವಚನಗಳಿಂದ ಸುಂದರ ಬದುಕು ನಿರ್ಮಾಣವಾಗುತ್ತದೆ. ವಚನ ಯಾನ ಗಾನದಿಂದ ಮನಸ್ಸು ನಿರಾಳಗೊಳ್ಳುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.
ಹಂಪಿನಗರದಲ್ಲಿ ನಡೆದ ಪ್ರಪುಣ್ಯ ಸಂಗೀತ ವಿದ್ಯಾಲಯದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವ ಸೇನಾನಿ ಶಿವಕುಮಾರಸ್ವಾಮಿ, ಪ್ರಪುಣ್ಯ ಸಂಗೀತ ವಿದ್ಯಾಲಯದ ಪಂ.ಈರಯ್ಯ ಚಿಕ್ಕಮಠ ಇದ್ದರು.