ಬೆಂಗಳೂರು: ಜಯನಗರದ 9ನೇ ಹಂತದಲ್ಲಿ ನಾಲ್ವರು ದುಷ್ಕರ್ಮಿಗಳು ಲೈಟರ್ನಿಂದ ಕಾರೊಂದಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
‘ಫೆ. 2ರ ನಸುಕಿನಲ್ಲಿ ದುಷ್ಕರ್ಮಿಗಳು ಎಸಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸನಾವುಲ್ಲಾ ಖಾನ್ ಎಂಬುವರಿಗೆ ಸೇರಿದ್ದ ಕಾರಿಗೆ ಹಾನಿ ಆಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಲಕ್ ನಗರ ಪೊಲೀಸರು ಹೇಳಿದರು.
‘ಹಳೇ ವೈಷಮ್ಯದಿಂದಾಗಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ’ ಎಂದರು.