<p><strong>ಬೆಂಗಳೂರು</strong>: 2021–22 ನೇ ಸಾಲಿಗೆ ₹10,265.33 ಕೋಟಿ ಮೊತ್ತದ ಪೂರಕ ಅಂದಾಜುಗಳ ಮೊದಲ ಕಂತಿನ ಪ್ರಸ್ತಾವನೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪ್ರಸ್ತಾವನೆಯನ್ನು ಮಂಡಿಸಿದರು. ಕೇಂದ್ರ ಪುರಸ್ಕೃತ ಗ್ರಾಮೀಣ ಕುಡಿಯುವ ನೀರು (ಜಲ್ ಜೀವನ್ ಮಿಷನ್) ಯೋಜನೆ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ₹2,858.05 ಕೋಟಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.</p>.<p>ಅನ್ನ ಭಾಗ್ಯ ಯೋಜನೆಗಾಗಿ ₹720 ಕೋಟಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ₹559 ಕೋಟಿ ಮತ್ತು ಕರ್ನಾಟಕ ಆಹಾರ ನಿಗಮವು ಪಡೆದ ನಗದು ಸಾಲದ ಮೇಲಿನ ಬಡ್ಡಿ ಮರುಪಾವತಿಗೆ ₹60 ಕೋಟಿ ಸೇರಿ ₹1,339 ಕೋಟಿ ಒದಗಿಸಲಾಗಿದೆ ಎಂದರು.</p>.<p><strong>ಪ್ರಮುಖ ಅಂಶಗಳು</strong><br />* ಕೋವಿಡ್ಗೆ ₹1400 ಕೋಟಿ ಒದಗಿಸಲಾಗಿದೆ. 1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಗೆ ₹300 ಕೋಟಿ, ಔಷಧ ಮತ್ತು ಪರಿಕರಗಳ ಖರೀದಿಗೆ ₹60 ಕೋಟಿ, ಪಿಪಿಇ ಕಿಟ್ ಮತ್ತು ಎನ್–95 ಮಾಸ್ಕ್ ಖರೀದಿಗೆ ₹100 ಕೋಟಿ, ಕೋವಿಡ್ ಪರೀಕ್ಷೆಯ ಕಿರು ಪರಿಕರಗಳನ್ನು ಖರೀದಿಗೆ ₹17.72 ಕೋಟಿ ಒದಗಿಸಿದ್ದು, ಕೋವಿಡ್ ಔಷಧಿಯ ಹೆಚ್ಚುವರಿ ಖರೀದಿಗಾಗಿ ₹140 ಕೋಟಿ ಒದಗಿಸಲಾಗಿದೆ.</p>.<p>* ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಗಳಿಗಾಗಿ ₹10.37 ಕೋಟಿ ಹೆಚ್ಚುವರಿ ಅನುದಾನ, ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ₹5 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 2021–22 ನೇ ಸಾಲಿಗೆ ₹10,265.33 ಕೋಟಿ ಮೊತ್ತದ ಪೂರಕ ಅಂದಾಜುಗಳ ಮೊದಲ ಕಂತಿನ ಪ್ರಸ್ತಾವನೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಪ್ರಸ್ತಾವನೆಯನ್ನು ಮಂಡಿಸಿದರು. ಕೇಂದ್ರ ಪುರಸ್ಕೃತ ಗ್ರಾಮೀಣ ಕುಡಿಯುವ ನೀರು (ಜಲ್ ಜೀವನ್ ಮಿಷನ್) ಯೋಜನೆ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ₹2,858.05 ಕೋಟಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.</p>.<p>ಅನ್ನ ಭಾಗ್ಯ ಯೋಜನೆಗಾಗಿ ₹720 ಕೋಟಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ₹559 ಕೋಟಿ ಮತ್ತು ಕರ್ನಾಟಕ ಆಹಾರ ನಿಗಮವು ಪಡೆದ ನಗದು ಸಾಲದ ಮೇಲಿನ ಬಡ್ಡಿ ಮರುಪಾವತಿಗೆ ₹60 ಕೋಟಿ ಸೇರಿ ₹1,339 ಕೋಟಿ ಒದಗಿಸಲಾಗಿದೆ ಎಂದರು.</p>.<p><strong>ಪ್ರಮುಖ ಅಂಶಗಳು</strong><br />* ಕೋವಿಡ್ಗೆ ₹1400 ಕೋಟಿ ಒದಗಿಸಲಾಗಿದೆ. 1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಗೆ ₹300 ಕೋಟಿ, ಔಷಧ ಮತ್ತು ಪರಿಕರಗಳ ಖರೀದಿಗೆ ₹60 ಕೋಟಿ, ಪಿಪಿಇ ಕಿಟ್ ಮತ್ತು ಎನ್–95 ಮಾಸ್ಕ್ ಖರೀದಿಗೆ ₹100 ಕೋಟಿ, ಕೋವಿಡ್ ಪರೀಕ್ಷೆಯ ಕಿರು ಪರಿಕರಗಳನ್ನು ಖರೀದಿಗೆ ₹17.72 ಕೋಟಿ ಒದಗಿಸಿದ್ದು, ಕೋವಿಡ್ ಔಷಧಿಯ ಹೆಚ್ಚುವರಿ ಖರೀದಿಗಾಗಿ ₹140 ಕೋಟಿ ಒದಗಿಸಲಾಗಿದೆ.</p>.<p>* ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಗಳಿಗಾಗಿ ₹10.37 ಕೋಟಿ ಹೆಚ್ಚುವರಿ ಅನುದಾನ, ಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ₹5 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>